ರಾಜ್ಯ ಲೋಕಾಯುಕ್ತ ಇಲಾಖೆ ಇತಿಹಾಸದಲ್ಲೇ ಐತಿಹಾಸಿಕ ದಾಳಿಯೊಂದು ಹಾವೇರಿಯಲ್ಲಿ ನಡೆದಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಲೊಕಾಯುಕ್ತ ಪ್ರಕರಣ ಇದಾಗಿದೆ
ರಾಜ್ಯ ಲೋಕಾಯುಕ್ತ ಇಲಾಖೆ ಇತಿಹಾಸದಲ್ಲೇ ಐತಿಹಾಸಿಕ ದಾಳಿಯೊಂದು ಹಾವೇರಿಯಲ್ಲಿ ನಡೆದಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಲೊಕಾಯುಕ್ತ ಪ್ರಕರಣ ಇದಾಗಿದೆ
ಹಾವೇರಿ :
ರಾಜ್ಯ ಲೋಕಾಯುಕ್ತ ಇಲಾಖೆ ಇತಿಹಾಸದಲ್ಲೇ ಐತಿಹಾಸಿಕ ದಾಳಿಯೊಂದು ಹಾವೇರಿಯಲ್ಲಿ ನಡೆದಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಲೊಕಾಯುಕ್ತ ಪ್ರಕರಣ ಇದಾಗಿದೆ. ಸರ್ಕಾರಿ ಅಧಿಕಾರಿಗೆ ಆಮಿಷವೊಡ್ಡಿ ಲಂಚ ನೀಡುತ್ತಿದ ವ್ಯಕ್ತಿಯನ್ನೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಕೊಡುವಾಗ ದಾಳಿ ಮಾಡಿದ ಹಾವೇರಿ ಲೋಕಾಯುಕ್ತ ಅಧಿಕಾರಿಗಳು, ಲಂಚ ಕೊಡುತ್ತಿದ್ದ ವಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. 99 ಸಾವಿರ ಲಂಚ ಕೊಡುತ್ತಿದ್ದ ಶರಣಪ್ಪ ಶೆಟ್ಟರ್ ಎಂಬ ಟೆಂಡರ್ದಾರನನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಹಾವೇರಿ ತಾಲೂಕು ಪಂಚಾಯಿತಿ ಇಓ ಭರತ್ ಹೆಗಡೆ ಎಂಬ ಅಧಿಕಾರಿಗೆ ಹಣ ಕೊಡುತ್ತಿದ್ದ ವ್ಯಕ್ತಿ ಬಂಧನ ಮಾಡಲಾಗಿದೆ. ಸಾಮಾಗ್ರಿ ಪೂರೈಕೆ ಟೆಂಡರ್ ನನಗೆ ಮಾಡಿಸಿ ಕೊಡಿ ಎಂದು ಅಧಿಕಾರಿಗೆ ಲಂಚದ ಆಮಿಷ ಒಡ್ಡುತ್ತಿದ್ದರು. ಆಮಿಷ ಒಡ್ಡಿದ ಬಳಿಕ ಲೋಕಾಯುಕ್ತರ ಕಚೇರಿಗೆ ತೆರಳಿದ್ದ ಅಧಿಕಾರಿ ಟೆಂಡರ್ದಾರನ ವಿರುದ್ಧ ದೂರು ನೀಡಿದ್ದರು. ಗುರುವಾರ ಇಓ ಭರತ್ ಹೆಗಡೆ ಅವರಿಗೆ ಮುಂಗಡ ಹಣ ಕೊಡುವಾಗ ದಾಳಿ ನಡೆದಿದ್ದು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ರಾಜ್ಯದಲ್ಲಿ ಮಾದರಿಯಾದ ಹಾವೇರಿ ಲೋಕಾಯುಕ್ತ ದಾಳಿ ಪ್ರಕರಣ. ಲಂಚ ಪಡೆಯುವುದು ಅಷ್ಟೇ ಅಪರಾಧ ಅಲ್ಲ, ಲಂಚ ಕೊಡುವುದೂ ಕೂಡ ಅಷ್ಟೆ ಅಪರಾಧ ಎಂಬುದನ್ನು ಈ ಮೂಲಕ ರಾಜ್ಯದ ಜನರಿಗೆ ತೋರಿಸಿದೆ ಲೋಕಾಯುಕ್ತ ಇಲಾಖೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆದಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು ಇದೇ ರೀತಿ ಲಂಚ ಕೊಡುವ ಸಾರ್ವಜನಿಕರನ್ನೂ ಸಿಕ್ಕಿಸಬಹುದು. ಆದರೆ ಲಂಚದ ಎಂಜಲಿಗೆ ಕೈ ಒಡ್ಡುವುದು ಕೆಲವರ ಜಾಯಮಾನ. ಅಂತವರ ನಡುವೆ ಈ ರೀತಿಯ ಪ್ರಾಮಾಣಿಕ ಅಧಿಕಾರಿಗಲೂ ಇರುತ್ತಾರೆ ಎನ್ನುವುದು ಶ್ಲಾಘನೀಯ ವಿಚಾರ.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0