ಕಾಂಗ್ರೆಸ್ನಿಂದ ಆಪರೇಷನ್ ಮಾಡ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಪಕ್ಷದಿಂದ ಅಥವಾ ಜೆಡಿಎಸ್ ಪಕ್ಷದ ನಾಯಕರಾಗಿರಲಿ ಯಾರೇ ಕಾಂಗ್ರೆಸ್ಗೆ ಬಂದರೂ ಸ್ವಾಗತ ಎಂದಿದ್ದಾರೆ.
ಕಾಂಗ್ರೆಸ್ನಿಂದ ಆಪರೇಷನ್ ಮಾಡ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಪಕ್ಷದಿಂದ ಅಥವಾ ಜೆಡಿಎಸ್ ಪಕ್ಷದ ನಾಯಕರಾಗಿರಲಿ ಯಾರೇ ಕಾಂಗ್ರೆಸ್ಗೆ ಬಂದರೂ ಸ್ವಾಗತ ಎಂದಿದ್ದಾರೆ.
ಹಾಸನ :
ಕಾಂಗ್ರೆಸ್ನಿಂದ ಆಪರೇಷನ್ ಮಾಡ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಪಕ್ಷದಿಂದ ಅಥವಾ ಜೆಡಿಎಸ್ ಪಕ್ಷದ ನಾಯಕರಾಗಿರಲಿ ಯಾರೇ ಕಾಂಗ್ರೆಸ್ಗೆ ಬಂದರೂ ಸ್ವಾಗತ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾವುದೇ ಪಕ್ಷದ ನಾಯಕರು ಬಂದರು ನಾವು ಸ್ವಾಗತ ಮಾಡ್ತೇವೆ. ಕಾಂಗ್ರೆಸ್ಗೆ ಬೇರೆ ಪಕ್ಷದ ಶಾಸಕರುಗಳು ಬರ್ತಾರೆ, ಮಾಜಿ MLA ಗಳು ಬರ್ತಾರೆ, ಹಲವಾರು ಮುಖಂಡರು ಬರ್ತಾರೆ. ನಾವು ಕಳೆದ ವಾರ ಮಾಡಿದ ಬ್ರೇಕ್ ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಕೇವಲ ಲೋಕಸಭಾ ಚುನಾವಣೆ ತಯಾರಿ ಹಾಗು ರಾಜ್ಯದಲ್ಲಿ ಎದುರಾಗಿರುವ ಬರ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
ಮತ್ತಷ್ಟು ಆಪರೇಷನ್ ಹಸ್ತದ ಸುಳಿವು ಕೊಟ್ಟ ಸಿಎಂ..
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭ ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಬೇರೆ ಬೇರೆ ಪಕ್ಷದಿಂದ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೇ ನಮ್ಮದು ‘ಆಪರೇಷನ್ ಹಸ್ತ’ ಅಲ್ಲ ‘ಕೋ ಆಪರೇಷನ್’ ಎಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಯಾವುದೇ ಪಕ್ಷದಿಂದ ನಾಯಕರು, ಶಾಸಕರು, ಮಾಜಿ ಶಾಸಕರು ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎನ್ನುವ ಮೂಲಕ ಆಪರೇಷನ್ ಹಸ್ತಕ್ಕೆ ಸ್ವಾಗತ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಜೆಡಿಎಸ್ ನಾಯಕರಲ್ಲಿ ಢವಢವ ಶುರುವಾಗಿದ್ದು, ರೆಸಾರ್ಟ್ ರಾಜಕಾರಣಕ್ಕೆ ನಿರ್ಧಾರ ಮಾಡಿದ್ದಾರೆ.
ರೆಸಾರ್ಟ್ ಕಡೆಗೆ ಹೊರಟ ಜೆಡಿಎಸ್ ಶಾಸಕರು..!
ರಾಜ್ಯದಲ್ಲಿ ಆಪರೇಷನ್ ಹಸ್ತದ ಚರ್ಚೆ ನಡೆಯುತ್ತಿರುವ ನಡುವೆ ಇಂದು ಹಾಸನಕ್ಕೆ ಜೆಡಿಎಸ್ನ ಎಲ್ಲಾ ಶಾಸಕರು ತೆರಳುತ್ತಿದ್ದಾರೆ. ಹಾಸನದಲ್ಲಿ ಹಾಸನಾಂಬ ದೇವರ ದರ್ಶನ ಪಡೆಯುವ ಉದ್ದೇಶದಿಂದ ತೆರಳುತ್ತಿರುವ ಶಾಸಕರು, ದರ್ಶನ ಮುಗಿಸಿದ ಬಳಿಕ ರೆಸಾರ್ಟ್ಗೆ ತೆರಳುತ್ತಿದ್ದಾರೆ. ಹಾಸನದ ರೆಸಾರ್ಟ್ ಒಂದರಲ್ಲಿ ಉಳಿಯುತ್ತೇವೆ. ಮುಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಮಾಹಿತಿ ನೀಡಿದ್ದಾರೆ. ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವ ಜೆಡಿಎಸ್ ಪಕ್ಷದ ನಡೆ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿಗೆ ಇದ್ದೇವೆ ಎಂಬ ಸಂದೇಶ ಕಳುಹಿಸಬೇಕು ಎನ್ನುವುದಕ್ಕೆ ಈ ನಿರ್ಧಾರ ಎಂದಿದ್ದಾರೆ. ಆದರೆ ಇದರ ಹಿಂದಿನ ಮಸಲತ್ತು ಏನು ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ.
‘ಆಪರೇಷನ್ ಕಾಂಗ್ರೆಸ್’ ಲಾಭ ನಷ್ಟದ ಲೆಕ್ಕಾಚಾರ..
ಕಾಂಗ್ರೆಸ್ ಪಕ್ಷಕ್ಕೆ ಕೇವಲ ಲೋಕಸಭಾ ಚುನಾವಣೆಯಲ್ಲಿ ಗೆಲ್ಲವುದು ಅಷ್ಟೇ ಪ್ರಮುಖ ಆಗಿದ್ದು, ಯಾವುದೇ ಓರ್ವ ಮುಖಂಡ 500 ಮತಗಳನ್ನು ಸೆಳೆಯುವ ಸಾಮರ್ಥ್ಯವಿದ್ದರೂ ಕಾಂಗ್ರೆಸ್ಗೆ ಸೇರುವುದಾದರೆ ಸೇರಲಿ ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಇದರಿಂದ ಕಾಂಗ್ರೆಸ್ಗೆ ತಾತ್ಕಾಲಿಕ ಲಾಭವೇ ಆಗಲಿದ್ದು, ಮುಂದಿನ ದಿನಗಳಲ್ಲಿ ನಾಯಕರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಶುರುವಾದರೆ ಅದರಿಂದ ಸಂಕಷ್ಟದ ಸರಮಾಲೆ ಎದುರಾಗಲಿದೆ ಎನ್ನಲಾಗ್ತಿದೆ.ಒಂದು ವೇಳೆ ಈಗಾಗಲೇ ಶಾಸಕರಾಗಿರುವ ನಾಯಕರನ್ನು ಸೆಳೆದರೆ ರಾಜ್ಯ ರಾಜಕಾರಣಲ್ಲಿ ಮತ್ತೊಂದು ರೀತಿಯ ಸಂಕಷ್ಟ ಎದುರಾಗುವ ಸಾಧ್ಯತೆಯಿದ್ದು, ಪರಿಪೂರ್ಣ ಪ್ರಮಾಣದ ಅಧಿಕಾರ ಕೊಟ್ಟರೂ ಬೇರೊಂದು ಪಕ್ಷವನ್ನು ಒಡೆದು ರಾಜಕಾರಣ ಮಾಡಿದ್ರು ಅನ್ನೋ ಅಪಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸುತ್ತಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಅಪಖ್ಯಾತಿ ಪಡೆದಿರುವ ಬಿಜೆಪಿ ಪಕ್ಷದಂತೆಯೇ ಕಾಂಗ್ರೆಸ್ ಕೂಡ ಅಲ್ಪ ಲಾಭಕ್ಕಾಗಿ ಜನರ ಮನಸಲ್ಲಿ ಅಪಖ್ಯಾತಿಗೆ ಗುರಿಯಾಗುವ ಸಾಧ್ಯತೆಯಿದೆ ಎನ್ನಬಹುದು.
ರಕ್ಷೀತಾ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0