ಸರ್ವ ಧರ್ಮ ಸಮಭಾವ ಸಾರುತ್ತಿರುವ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ದರ್ಗಾದಲ್ಲಿ ಸಂಭ್ರಮದಿಂದ ನೆರವೇರಿತು
ಸರ್ವ ಧರ್ಮ ಸಮಭಾವ ಸಾರುತ್ತಿರುವ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ದರ್ಗಾದಲ್ಲಿ ಸಂಭ್ರಮದಿಂದ ನೆರವೇರಿತು
ಗಜೇಂದ್ರಗಡ : ಪಟ್ಟಣದ ಜಮಾಲ ಶಾವಲಿ ಕಾಲೋನಿಯಲ್ಲಿ ಸರ್ವ ಧರ್ಮ ಸಮಭಾವ ಸಾರುತ್ತಿರುವ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ದರ್ಗಾದಲ್ಲಿ ಸಂಭ್ರಮದಿಂದ ನೆರವೇರಿತು
ಬಳಿಕ ಅಮರೇಶ ಮಾರನಬಸರಿ ಮಾತನಾಡಿ ನಗರದ ಕುಷ್ಟಗಿ ರಸ್ತೆಯ ಬಳಿ ಇರುವ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ದರ್ಗಾದಲ್ಲಿ ಕಳೆದ ಏಳು ವರ್ಷಗಳಿಂದ ಸರ್ವಧರ್ಮ ಸಮನ್ವಯತೆಯನ್ನು ಗುರಿಯಾಗಿಸಿಕೊಂಡ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುತ್ತಾ
ಬಂದಿರುವ ದರ್ಗಾ, ನಗರದ ಹಿಂದೂ ಮುಸ್ಲಿಂ ಜನಾಂಗದ ಶ್ರದ್ಧಾ ಕೇಂದ್ರವಾಗಿದೆ, ಎರಡು ದಿನಗಳ ಗಂಧ ಮತ್ತು ಉರುಸುನಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದರು ಉರುಸು ಪ್ರಯುಕ್ತ ದರ್ಗಾದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು ಭಕ್ತರು ಇಷ್ಟಾರ್ಥ ಸಿದ್ದಿ ಜೊತೆ ಹಲವಾರು ರೋಗರು ದಿನಗಳಲ್ಲಿ ನಿವಾರಕ ಶಕ್ತಿ ಹೊಂದಿ ಅಸಂಖ್ಯಾತ ಭಕ್ತರು ಆರಾಧ್ಯ ದೈವ ಜನಿಸಿರುವ ಜಮಾಲ್ ಶಾವಲಿ ಖಾದ್ರಿ ಅವರ ಭಾವೈಕ್ಯತೆ ಉರುಸ್, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸರ್ವಧರ್ಮೀಯರ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದರು.
ಬಳಿಕ ಭಕ್ತರು ಭಕ್ತಿಯ ಪರಾಕಷ್ಟೇ ಮೆರೆದರು ಮಧ್ಯಾಹ್ನ ಸಾಮೂಹಿಕ ಅನ್ನಸಂಪರ್ಪಣೆ ನಡೆಯಿತು ಇದಕ್ಕೂ ಮುನ್ನ ವಿಶೇಷ ಪೂಜಾ ಕಾರ್ಯಕ್ರಮ ಮೂಲಕ ಗಾಂಧಾಭಿಷೇಕ (ಸಂದಲ್) ನಡೆಯಿತು.
ಬಳಿಕ ಬಾಷೆಸಾಬ ಕರ್ನಾಚಿ ಮಾತನಾಡಿ, ಹಜರತ್ ಸೈಯ್ಯದ ಶಾ ಜಮಾಲ ಶಾವಲಿ ಖಾದ್ರಿ ದರ್ಗಾಗೆ ಹಿಂದೂ, ಮುಸ್ಲಿಂ,ಕ್ರಿಶ್ಚನ ಎನ್ನುವ ಭೇದವಿಲ್ಲದೆ ಸರ್ವರು ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ ಇಲ್ಲಿ ಜಾತಿ ಧರ್ಮ ಕುಲಗೋತ್ರಗಳ ಆಚರಣೆ ಇಲ್ಲವೇ ಇಲ್ಲ. ನಾವು ನಂಬಿರುವುದು ಭಗವಂತನನ್ನು ಮಾತ್ರ. ದೇವರ ಸೃಷ್ಟಿಯಲ್ಲಿ ಎಲ್ಲರೂ ಒಂದೇಯಾಗಿರುವ ತಾರತಮ್ಯ ಮಾಡಲು ನಮಗೆ ಹಕ್ಕು ಇಲ್ಲ ಹೀಗಾಗಿ ಧರ್ಮ ಯಾವುದೇ ಆಗಿರಲಿ ನಂಬಿಕೆಯೇ ದೇವರು ಇಲ್ಲದಿದ್ದರೆ ಬರಿ ಕಲ್ಲು ಅಷ್ಟೇ, ಮಾನವನ ಶ್ರದ್ಧಾ ಭಕ್ತಿಯ ಮೇಲೆ ದೇವರು ಸತ್ವಲ ದುಷ್ಪಲಗಳನ್ನು ಕರುಣಿಸುತ್ತಾನೆ ಎಂದರು.
ಇದೇ ಸಂದರ್ಭದಲ್ಲಿ ಅಬ್ದುಲಸಾಬ ಕಾತರಕಿ,ಬಾಬುಸಾಬ ಹನುಗುಂದ,ಅಂಬರೀಶ ಮಾರನಬಸರಿ, ಫಕ್ರುಸಾಬ ಕಾತರಕಿ,ಭಾಷೆ ಸಾಬ್ ಕರ್ನಾಚಿ , ದಾದಾಪೀರ ಉಟಗೂರ, ಶಾಮಿದ ಮಾಲ್ದಾರ,ಬಾಬುಸಾಬ್ ಅಕ್ಕಿ, ಮಕ್ತುಮಸಾಬ ಚಾಮಲಾಪುರ. ಸಲೀಂ ಭಾದಿಕಟ್ಟಿ , ಬಾಷಾಸಾಬ ಮುದಗಲ್, ಸೇರಿದಂತೆ ಹಲವಾರು ಜನ ಪಾಲ್ಗೊಂಡಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0