ತಾಲೂಕಿನ ಯರೆ ಹಂಚಿನಾಳ ಗ್ರಾಮದ ರೈತರು ಮಳೆಯಾಗದೆ ಕಂಗೆಟ್ಟಿದ್ದು ಮಳೆರಾಯನ ಕೃಪೆಗಾಗಿ ವಿಶೇಷ ಪ್ರಾರ್ಥನೆ
ತಾಲೂಕಿನ ಯರೆ ಹಂಚಿನಾಳ ಗ್ರಾಮದ ರೈತರು ಮಳೆಯಾಗದೆ ಕಂಗೆಟ್ಟಿದ್ದು ಮಳೆರಾಯನ ಕೃಪೆಗಾಗಿ ವಿಶೇಷ ಪ್ರಾರ್ಥನೆ
ಕುಕನೂರು :
ತಾಲೂಕಿನ ಯರೆ ಹಂಚಿನಾಳ ಗ್ರಾಮದ ರೈತರು ಮಳೆ ಆಗದೆ ಕಂಗೆಟ್ಟಿದ್ದು ಮಳೆರಾಯನ ಕೃಪೆಗಾಗಿ ವಿಶೇಷ ಪ್ರಾರ್ಥನೆಯ ಕಾರ್ಯವನ್ನು ಜರುಗಿಸಿದರು.
ಯರೆ ಹಂಚಿನಾಳ ಗ್ರಾಮದ ಹೊರವಲಯದಲ್ಲಿರುವ ಶ್ರೀ ಪತ್ರೇಶ್ವರ ದೇವಸ್ಥಾನದ ಹಿಂದೆ ಹರಿಯುವ ಹಳ್ಳದಲ್ಲಿ ವಿಶೇಷ ಪೂಜೆ ಮಾಡುವುದರೊಂದಿಗೆ ರೈತರು ಮಳೆಗಾಗಿ ವರುಣದೇವನ ಮೊರೆ ಹೋದರು.
ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಮಳೆಯಾಗದೆ ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದ್ದು ರೈತರ ಕೃಷಿ ಚಟುವಟಿಕೆಗಳೆಲ್ಲವೂ ಕುಂಠಿತಗೊಂಡಿರುತ್ತವೆ. ಮುಂಗಾರು ಹಂಗಾಮ ಮುಗಿಯುತ್ತ ಬಂದರು ಸಹ ನಿಗದಿತ ಪ್ರಮಾಣದ ಮಳೆಯಾಗಿದೆ ಹಲವಾರು ರೈತರು ಬೀಜ ಬಿತ್ತನೆ ಕಾರ್ಯ ಮಾಡದೆ ಮಳೆಗಾಗಿ ಕಾದು ಕುಳಿತಿದ್ದರೆ ಇನ್ನೂ ಕೆಲ ರೈತರು ಮಳೆ ಬರುವ ನಿರೀಕ್ಷೆಯಲ್ಲಿ ಬೀಜ ಬಿತ್ತನೆಯ ಕಾರ್ಯ ಮುಗಿಸಿದ್ದು ಬಿತ್ತಿದ ಬೀಜವೂ ಮೊಳಕೆ ಒಡೆದಿದ್ದು ಸದ್ಯ ಮಳೆ ಇಲ್ಲದೆ ಸಸಿಗಳು ಬಾಡಿ ಹೋಗುವ ಆತಂಕದಲ್ಲಿ ರೈತರು ಚಿಂತಾಕ್ರಾಂತರಾಗಿರುತ್ತಾರೆ.
ರೈತರಿಗೆ ಕೃಷಿ ಚಟುವಟಿಕೆಯೆ ಮೂಲಾಧಾರವಾಗಿದ್ದು, ಕೃಷಿಗೆ ಮಳೆ ಆಧಾರ ಸ್ತಂಭವಾಗಿರುತ್ತದೆ. ಆದ್ದರಿಂದ ಗ್ರಾಮದ ರೈತರು ಹಾಗೂ ಪ್ರಮುಖರು ಸೇರಿಕೊಂಡು ಗ್ರಾಮದ ಪತ್ರೇಶ್ವರ ದೇವಸ್ಥಾನದ ಹಿಂದುಗಡೆ ಹರಿಯುವ ಹಳ್ಳದಲ್ಲಿ ವರ್ಣದೇವನ ಕೃಪೆಗಾಗಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿದರ.
ಈ ವೇಳೆಯಲ್ಲಿ ರೈತರ ಬಹುತೇಕ ಕಾರ್ಯಗಳಲ್ಲಿ ಸಹಭಾಗಿರುವ ಎತ್ತುಗಳಿಗೂ ಸಹ ಪೂಜೆ ಮಾಡಲಾಯಿತು. ನಂತರ ಅನ್ನಸಂತರ್ಪಣೆಯ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ರೈತ ವರ್ಗದವರು ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0