ರೋಣ ಮತಕ್ಷೇತ್ರಕ್ಕೆ ತನ್ನದೇಯಾದ ಐತಿಹಾಸಿಕ ಪರಂಪರೆ ಇದೇ. ಈ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿದ ಈ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿ ಪರ್ಸಂಟೆಜ್ ಸರ್ಕಾರ ಎಂಬ ಕಾರಣಕ್ಕೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಎಸ್ ಪಾಟೀಲ್ ಗೆ ಬಹುಮತದ ಜನಾದೇಶ ನೀಡಿದ್ದು ಈ ಕ್ಷೇತ್ರದ ಪರಂಪರೆಯಂದೆ ಹೇಳಬೇಕಾಗುತ್ತದೆ.
ಗಜೇಂದ್ರಗಡ :
ರೋಣ ಮತಕ್ಷೇತ್ರಕ್ಕೆ ತನ್ನದೇಯಾದ ಐತಿಹಾಸಿಕ ಪರಂಪರೆ ಇದೇ. ಈ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿದ ಈ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿ ಪರ್ಸಂಟೆಜ್ ಸರ್ಕಾರ ಎಂಬ ಕಾರಣಕ್ಕೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಎಸ್ ಪಾಟೀಲ್ ಗೆ ಬಹುಮತದ ಜನಾದೇಶ ನೀಡಿದ್ದು ಈ ಕ್ಷೇತ್ರದ ಪರಂಪರೆಯಂದೆ ಹೇಳಬೇಕಾಗುತ್ತದೆ.
ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಬಿ ಅಭ್ಯರ್ಥಿ ಕಳಕಪ್ಪ ಬಂಡಿ ಅಷ್ಟೇನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳದೇ ಇರುವುದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ ಎಂದು ಬಹುತೇಕರ ಅಭಿಪ್ರಾಯವಾಗಿದೆ.
ಗದಗ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕ್ಷೇತ್ರ ಎನಿಸಿರುವು ರೋಣ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಎಸ್ ಪಾಡೀಲರಿಗೆ ಹಣಾ-ಹಣಿ ಇತ್ತಾದರು ಆಮ್ ಆದ್ಮಿ ಮತ್ತು ಜೆಡಿಎಸ್ ಈ ಪಕ್ಷಗಳು ತಮ್ಮ ಖಾತೆಗಯನ್ನು ತೆರದುಕೊಂಡಾಗಲೂ ಹೆಚ್ಚಿನ ಮತ ಸೇಳೆಯುವಲ್ಲಿ ಕಾರಣವಾದ್ದರಿಂದ ಬಿಜೆಪಿಯ ಮತಗಳೇ ಹೊಡೆದು ಹೋಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ನಿಷ್ಚಳ ಬಹುಮತ ಮೂಡಿಬಂದಿದೆ ಅಲ್ಲದೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆಯನ್ನು ಹಿಡಿಯುವಲ್ಲಿ ಯಶಸ್ವಿ ಕಂಡಿದ್ದರಿಂದ ಈ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷಿತ ಅಭಿವೃದ್ಧಿಯಾಗುವ ಎಲ್ಲ ಲಕ್ಷಣಗಳು ಇವೇ ಎಂಬುವುದು ತೀರ್ಪು ನೀಡಿದ ಜನಾದೇಶವಾಗಿದೆ.
ಪಕ್ಷದ ಹಣಾ-ಹಣಿಯಲ್ಲಿ ಹಾಲಿ ಶಾಸಕ ಕಳಕಪ್ಪ ಬಂಡಿ -69519. ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಎಸ್ ಪಾಟೀಲ್ -94064. ಮತಗಳನ್ನು ಪಡೆಯುವ ಮೂಲಕ 24545 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದು ಕಾರ್ಯಕರ್ತರ ಹರ್ಷೋಲ್ಲಾಸ ಮುಗಿಲು ಮುಟ್ಟಿದೆ.
ಠೀಕೆಗಳು 0