ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ ಸದಸ್ಯರುಗಳ ನಡುವೆ ಸಮನ್ವಯತೆ ಕಾಣದೆ ಕಳೆದ ಒಂದು ವರ್ಷದಿಂದ ಗ್ರಾಮ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗಿವೆ.
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ ಸದಸ್ಯರುಗಳ ನಡುವೆ ಸಮನ್ವಯತೆ ಕಾಣದೆ ಕಳೆದ ಒಂದು ವರ್ಷದಿಂದ ಗ್ರಾಮ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗಿವೆ.
ನಿಂಗರಾಜ ದೊಡ್ಡಮನಿ
ಕುಕನೂರು :
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ ಸದಸ್ಯರುಗಳ ನಡುವೆ ಸಮನ್ವಯತೆ ಕಾಣದೆ ಕಳೆದ ಒಂದು ವರ್ಷದಿಂದ ಗ್ರಾಮ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗಿವೆ. ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನ್ನಿಕೊಪ್ಪ ಮಾಳೆಕೊಪ್ಪ ಮತ್ತು ನಿಂಗಾಪುರ ಎಂಬ ಮೂರು ಗ್ರಾಮಗಳು ಇದ್ದು ಗ್ರಾಮ ಪಂಚಾಯತಿ ಒಟ್ಟು 13 ಸದಸ್ಯರ ಬೆಲೆ ಹೊಂದಿದೆ, ಕಳೆದೊಂದು ವರ್ಷದಿಂದ ಬನ್ನಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಅಭಿವೃದ್ಧಿಯ ಕಾರ್ಯಗಳು ಕುಂಠಿತವಾಗಿ ಗ್ರಾಮಗಳು ಸೋಚನಿಯ ಸ್ಥಿತಿಗೆ ವಾಲಿವೆ.
"ನಡೆಯದ ಸಾಮಾನ್ಯ ಸಭೆಗಳು".
ಪ್ರತಿ ತಿಂಗಳು ನಡೆಯಬೇಕಾದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಕಳೆದ ವರ್ಷ 2022ರ ಆಗಸ್ಟ್ ತಿಂಗಳಲ್ಲಿ ನಡೆದಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವ ಒಂದು ಸಾಮಾನ್ಯ ಸಭೆಯಾಗಲಿ, ತುರ್ತು ಸಭೆಯಾಗಲಿ ನಡೆದಿಲ್ಲ, ಸಾಮಾನ್ಯ ಸಭೆಗಳು ನಡಿಯದೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಮರಿಚೀಕೆಯಾಗಿವೆ.
ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ.
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರುಗಳಾದ ಬನ್ನಿಕೊಪ್ಪ, ಮಾಳೆಕೊಪ್ಪ ಗ್ರಾಮಗಳಲ್ಲಿ ಕಳೆದ ಒಂಬತ್ತು ದಿನಗಳಿಂದ ಕುಡಿಯುವ ನೀರಿನ ವ್ಯಥೆಯ ವಾಗಿದ್ದು ಜನರು ಕಿಲೋಮೀಟರುಗಳ ದೂರದ ಕೃಷಿ ಹೊಂಡಗಳಲ್ಲಿ ಸೇಖರಣೆಗೊಂಡ ನೀರನ್ನು ತಂದು ದಾಹ ತಣಿಸಿಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗದ ಬೀದಿ ದೀಪಗಳು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬನ್ನಿಕೊಪ್ಪ ಗ್ರಾಮದ ಬೀದಿಯಲ್ಲಿರುವ ಸಾಲು ದೀಪಗಳು ಬೆಳಗಿ ಹದಿನೈದರಿಂದ ಇಪ್ಪತ್ತು ದಿನಗಳಾಗಿವೆ. ಸಂಜೆಯಾದರೆ ಗ್ರಾಮದಲ್ಲಿ ಕತ್ತಲು ಕವಿದ ವಾತಾವರಣ ನಿರ್ಮಾಣವಾಗುತ್ತದೆ.
ಇಲ್ಲದ ನೀರಿನ ಮೂಲಗಳ ಪರ್ಯಾಯ ವ್ಯವಸ್ಥೆ.
ಬನ್ನಿಕೊಪ್ಪ ಗ್ರಾಮಕ್ಕೆ ಕೇವಲ ಎರಡೇ ಎರಡು ನೀರಿನ ಮೂಲಾಧಾರವಾಗಿದ್ದು ಒಂದು ಗ್ರಾಮದ ಪಕ್ಕದಲ್ಲಿರುವ ಅಮೃತ ಸರೋವರ ಯೋಜನೆ ಅಡಿಯಲ್ಲಿ ನಿರ್ಮಾಣದ ಬೃಹತ್ ಗಾತ್ರದ ಕೆರೆ ಆ ಕೆರೆಯು ಬೇಸಿಗೆ ಕಾಲದಲ್ಲಿ ಬತ್ತಿಹೋಗುತ್ತದೆ ಮಳೆಯ ನೀರು ಸಂಗ್ರಹವಾದ ಮಾತ್ರ ಕೆರೆಯ ನೀರು ಉಪಯೋಗಕ್ಕೆ ಅನುಕೂಲವಾಗುತ್ತದೆ., ಇನ್ನೊಂದು ತುಂಗಭದ್ರ ನದಿಯಿಂದ ಪೈಪ್ ಲೈನ್ ಮುಖಾಂತರ ಸರಬರಾಜು ಆಗುತ್ತಿರುವ ನೀರಿನ ಮೂಲ ಇವೆರಡು ಬಿಟ್ಟರೆ ಗ್ರಾಮಕ್ಕೆ ಬೇರೆ ಯಾವುದೇ ರೀತಿಯ ನೀರಿನ ಮೂಲ ಆಧಾರಗಳು ಇರುವುದಿಲ್ಲ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ವತಿಯಿಂದ ಸರಬರಾಜು ಆಗುವ ನೀರು ಗ್ರಾಮಕ್ಕೆ ಬಾರದೆ ಹೋದರೆ ಇಲ್ಲಿನ ಜನ ಸಾಮಾನ್ಯರು ಸಂಕಷ್ಟ ಎದುಸಬೇಕಾಗುತ್ತದೆ.
ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿರುವುದಿಲ್ಲ, ಸಮಸ್ಯೆಯನ್ನು ಹೇಳಿಕೊಳ್ಳಲು ಬಂದರೆ ಪಂಚಾಯ್ತಿ ಕಾರ್ಯಾಲಯದಲ್ಲಿ ಪಿಡಿಒ ಇರುವುದಿಲ್ಲ ಸಿಬ್ಬಂದಿಗಳು ಕೇಳಿದರೆ ಇವಾಗ ತಾನೆ ಹೋದರು ಎಂಬ ಹೇಳಿಕೆಗಳು ಬರುತ್ತಿವೆ. ಪಿಡಿಓ ಅವರು ವಾರದಲ್ಲಿ ಎರಡು ದಿನ ಮಾತ್ರ ಬರುತ್ತಾರೆ ಬಂದರೂ ಒಂದರಿಂದ ಎರಡು ತಾಸು ಪಂಚಾಯಿತಿ ಕಾರ್ಯಾಲಯದಲ್ಲಿ ಇದ್ದು ಅಲ್ಲಿಂದ ಹೋಗುತ್ತಾರೆ ಎಂದು ಹೆಸರು ಹೇಳದ ವ್ಯಕ್ತಿ ತಿಳಿಸಿದರು.
"ಗ್ರಾಮ ಪಂಚಾಯಿತಿಯಲ್ಲಿ ಕಳೆದ ವರ್ಷ 2022ರ ಆಗಸ್ಟ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯು ಕೊನೆಯ ಸಾಮಾನ್ಯ ಸಭೆಯಾಗಿದ್ದು ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸಾಮಾನ್ಯ ಸಭೆಯಾಗಲಿ ತುರ್ತು ಸಭೆಯಾಗಲಿ ನಡೆದಿರುವುದಿಲ್ಲ, ಇದರಿಂದ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಿದೆ, ವಾರ್ಡುಗಳಲ್ಲಿ ನೀರು ಬಾರದೆ ಜನರು ಪರಿ ತಪ್ಪಿಸುತ್ತಿದ್ದಾರೆ,ಬೀದಿ ದೀಪಗಳ ಸಮಸ್ಯೆ ಇದೆ ಪಿಡಿಓ ವಾರದಲ್ಲಿ ಎರಡು ದಿನ ಮಾತ್ರ ಆಫೀಸಿಗೆ ಬರುತ್ತಾರೆ ಇದರಿಂದ ಗ್ರಾಮ ಪಂಚಾಯತಿಯ ಗ್ರಾಮಗಳಿಗೆ ತುಂಬಾ ತೊಂದರೆಯಾಗುತ್ತಿದೆ".
ನಾಗರಾಜ ವೆಂಕಟಾಪೂರ, ಬನ್ನಿಕೊಪ್ಪ ಗ್ರಾಮ ಪಂಚಾಯತ್ ಸದಸ್ಯ.
"ನಾನು ಎರಡು ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡು ಗ್ರಾಮ ಪಂಚಾಯಿತಿಗಳು ದೊಡ್ಡ ಗ್ರಾಮ ಪಂಚಾಯತಿಗಳಾಗಿವೆ ಅವುಗಳಿಗೆ ಸಮಯ ಹೊಂದಿಸಿಕೊಳ್ಳಲು ಆಗದೆ ಇಂತೆಲ್ಲ ಸಮಸ್ಯೆಗಳು ನಿರ್ಮಾಣವಾಗುತ್ತಿವೆ. ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುವುದು".
ಸುರೇಶ್ ರಾಥೋಡ್, ಬನ್ನಿಕೊಪ್ಪ ಗ್ರಾಮ ಪಂಚಾಯತ್ ಪಿಡಿಓ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0