ತಾಲೂಕಿನ ಸಿದ್ನಕೊಪ್ಪ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ವು ಅದ್ದುರಿಯಾಗಿ ನೆರವೇರಿತು.
ತಾಲೂಕಿನ ಸಿದ್ನಕೊಪ್ಪ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ವು ಅದ್ದುರಿಯಾಗಿ ನೆರವೇರಿತು.
ಕುಕನೂರ :
ತಾಲೂಕಿನ ಸಿದ್ನಕೊಪ್ಪ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ವು ಅದ್ದುರಿಯಾಗಿ ನೆರವೇರಿತು.
ನಾಮಫಲಕವನ್ನೂ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎನ್.ವಿ.ಬಾಬು ಅನಾವರಣಗೊಳಿಸುವುದರೊಂದಿಗೆ ಅದ್ದೂರಿಯಾಗಿ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವಣದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭ ಸಭೆಯನ್ನು ಉದ್ದೇಶಿಸಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎನ್.ವಿ.ಬಾಬು ಮಾತನಾಡುತ್ತಾ ಭಾರತ ದೇಶ ಕೃಷಿ ಆಧಾರಿತ ರೈತಾಪಿ ವರ್ಗಗಳ ನಾಡು, ಬಹುತೇಕ ಎಲ್ಲಾ ಕೈಗಾರಿಕೆ ಗಳು ರೈತರ ಬೆಳೆಗಳನ್ನು ಅವಲಂಬಿಸಿವೆ, ನಮ್ಮ ಸಮಾಜ ಅನ್ನದಾತನಾಗಿರುವ ರೈತರನ್ನು ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ವಿಷಯದಲ್ಲೂ ಕಡೆಗಣಿಸುತ್ತಾ ಬಂದಿರುವುದು ಯೋಚನೆಯಾಗಿದ್ದು ಇನ್ನು ಮುಂದಾದರೂ ರೈತ ಸಂಘಟನೆಗಳು ಬಲಪ್ರದರ್ಶನ ಗೋಳಿಸುವುದರೊಂದಿಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಸರ್ಕಾರದಿಂದ ರೈತನಿಗೆ ಸಿಗುವ ಸೌಲಭ್ಯವನ್ನು ಪಡೆದುಕೊಂಡು ಪ್ರತಿಯೊಬ್ಬ ರೈತನು ಸಶಕ್ತ ನಾಗಿ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ನಾಗರಾಜ ಗೋನಾಳ.ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ.ರಾಜ್ಯ ಸಂಚಾಲಕ ಬಸವರಾಜ ಪಾಟೀಲ್. ರಾಜ್ಯ ಸಮಿತಿ ಸದಸ್ಯ ಶ್ರೀಶೈಲ ಎಚ್ ಕುಮಸಗಿ. ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ. ಹಾಸನ ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮಾ ಚನ್ನಪಟಣ್ಣ.ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ. ಕುಕನೂರು ತಾಲೂಕ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತ ಗೂಳರೆಡ್ಡಿ. ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮುಖಂಡರು ಗುರುಹಿರಿಯರು ಇತರರು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0