ಇವತ್ತಿನ ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಿರೋದು ವಿಶೇಷ. ನಾನು ಕೋಲಾರದಲ್ಲಿ ಹುಟ್ಟಿದ್ದು, ಗೆದ್ದಿದ್ದು ಬೆಂಗಳೂರಿನಲ್ಲಿ.
ಇವತ್ತಿನ ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಿರೋದು ವಿಶೇಷ. ನಾನು ಕೋಲಾರದಲ್ಲಿ ಹುಟ್ಟಿದ್ದು, ಗೆದ್ದಿದ್ದು ಬೆಂಗಳೂರಿನಲ್ಲಿ.
ರಾಜ್ಯ :
ಇವತ್ತಿನ ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಿರೋದು ವಿಶೇಷ. ನಾನು ಕೋಲಾರದಲ್ಲಿ ಹುಟ್ಟಿದ್ದು, ಗೆದ್ದಿದ್ದು ಬೆಂಗಳೂರಿನಲ್ಲಿ. ನಮ್ಮದು ಕೂಡ ರೈತಾಪಿ ಕುಟುಂಬ.ಇವತ್ತು ನಾವು ಕೃಷಿ ಅವಲಂಭಿಸಿದ್ದೇವೆ. ನಮ್ಮಲ್ಲಿ ಹೈನುಗಾರಿಕೆ, ರೇಷ್ಮೆ ಹೆಚ್ಚು. ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳೋದು ಮಹಿಳೆಯರು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಗ್ಯಾರೆಂಟಿ ಯೋಜನೆಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಷ್ಮೆ ಬೆಳೆಯೋದು ಕೂಡ ಮಹಿಳೆಯರೇ ಹೆಚ್ಚು ಮಹಿಳೆಯರ ದುಡಿಮೆಯಿಂದ ಇವತ್ತು ಕೃಷಿಕಾಯಕ, ಒಕ್ಕಲುತನ ಉಳಿದಿದೆ. ನಮ್ಮ ಮನೆಯಲ್ಲೂ 82ರಿಂದ ನಮ್ಮ ತಾಯಿಯೇ ವ್ಯವಸಾಯ ಮಾಡ್ತಿದ್ರು. ನಮ್ಮನ್ನ ವಿದ್ಯಾಭ್ಯಾಸ ಮಾಡಿಸಿ ಬೆಳೆಸಿದ್ದು ನನ್ನ ತಾಯಿ. ಗೃಹಲಕ್ಷ್ಮೀ ಯೋಜನೆ ಮಾಡಿದ್ದೇ ಮಹಿಳೆಯರ ಶ್ರೇಯಸ್ಸಿಗೆ ಎಂದರು.
ಮಹಿಳೆಯರ ಪಾತ್ರ ಅರಿತೇ ಈ ಯೋಜನೆ ಜಾರಿ.
ಮಹಿಳೆಯರ ದುಡಿಮೆ ಹೊಗಳುವ ಮಾತು ನಮ್ಮಿಂದ ಬರಲ್ಲ. ಮಹಿಳೆ ವಿಚಲಿತರಾದರೆ ಕುಟುಂಬ ಕುಗ್ಗುತ್ತದೆ. ನಮ್ಮ ಭರವಸೆಗಳನ್ನ ಹಲವರು ಟೀಕೆ ಮಾಡಿದ್ರು. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಯೋಜನೆ ಅನುಷ್ಠಾನ. ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಹಾಕ್ತಿರೋದು ಕಾಂಗ್ರೆಸ್ ಸರ್ಕಾರ. ಮಹಿಳೆ ಯಾರ ಮೇಲು ಅವಲಂಬಿತರಾಗಬಾರದು. ಸ್ವಾವಲಂಬನೆಯಿಂದ ಬದುಕಬೇಕು ಅಂತಾ ಶಕ್ತಿ ಯೋಜನೆ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 3.50ಕೋಟಿ ಮಹಿಳೆಯರ ಉಚಿತ ಪ್ರಯಾಣ ಮಾಡಿದ್ದಾರೆ. ನಾವು ಕೊಟ್ಟ ಅಕ್ಕಿಯನ್ನ ಹಿಂದಿನ ಸರ್ಕಾರ ಕಿತ್ತುಕೊಳ್ಳುವ ಕೆಲಸ ಮಾಡಿದ್ರು.
ನಾವು ಭರವಸೆ ಕೊಟ್ಟಂತೆ ಐದು ಕೆಜಿ ಅಕ್ಕಿ ಉಳಿದ ಐದು ಕೆಜಿಗೆ ಹಣ ಕೊಟ್ಟೆವು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ. ಸರ್ವೇ ಆಧರಿಸಿ 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡ್ತಿದ್ದೇವೆ. ಸರ್ವೆಯಲ್ಲಿ 72 ಪರ್ಸೆಂಟ್ ಕ್ರಾಸ್ ಬೇಕು ಅಂದಿದ್ರು. ಅಕ್ಕಿ ಬದಲು 5,495 ಕೋಟಿ ಹಣ ಹಾಕಿದ್ದೇವೆ.
ಯುವ ಜನರಿಗೂ ಯುವನಿಧಿ ಯೋಜನೆ ಅನುಷ್ಠಾನ. ಗೃಹಜ್ಯೋತಿ ಮೂಲಕ ಮನೆಯ ಖರ್ಚು ಕಡಿಮೆ ಮಾಡಿದ್ದೇವೆ. ಕರೆಂಟ್ ಬಿಲ್ ಮನ್ನಾದಿಂದ ನಾಲ್ಕು ಕೋಟಿ ಜನರಿಗೆ ಉಪಯೋಗ ಆಗುತ್ತಿದೆ ಎಂದರು.
ಈ ಯೋಜನೆಗಳಿಂದ ವರ್ಷಕ್ಕೆ 57-60ಕೋಟಿ ಸರ್ಕಾರಕ್ಕೆ ಖರ್ಚಾಗಲಿದೆ. ಈ ಹಿಂದಿನ ಸರ್ಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು. ಇವತ್ತು ಮಧ್ಯವರ್ತಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿದೆ.ಪ್ರಪಂಚದಲ್ಲಿ ಯಾರಿಂದಲೂ ಇದನ್ನ ಮಾಡಲು ಸಾಧ್ಯವಾಗಲಿಲ್ಲ. ಒಂದು ರೂಪಾಯಿ ಕರೆಪ್ಷನ್ ಇಲ್ಲದೇ ಅಭಿವೃದ್ಧಿ ಮಾಡ್ತಿದೆ ನಮ್ಮ ಸರ್ಕಾರ. ನಮ್ಮ ವಿರೋಧಿಗಳು ಇದೆಲ್ಲವನ್ನೂ ಬಿಟ್ಟು ಬೇರೆ ವಿಚಾರ ತರ್ತಾರೆ. ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲಿಲ್ಲ. ಆದ್ರೂ 31 ಲಕ್ಷ ರೈತರಿಗೆ 2000 ರೂಪಾಯಿ ಹಾಕಿದ್ದೇವೆ. ನಾಳೆ ದೆಹಲಿಯಲ್ಲಿ ಪ್ರತಿಭಟನೆ ಇಟ್ಟಿದ್ದೇವೆ. ಬಜೆಟ್ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡ್ತಿದೆ. ಬರ ಪರಿಹಾರ ಕೂಡಲಿಲ್ಲ ಎಂದು ಹೇಳಿದರು.
ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಇವತ್ತು ಇಡೀ ದೇಶಕ್ಕೆ ದುಡಿಯುವ ಎತ್ತು ಅಂದ್ರೆ ಕರ್ನಾಟಕ.ದುಡಿಯುವ ಎತ್ತಿನ ಕರ್ನಾಟಕದ ಉಸಿರು ಕಟ್ಟುವ ಕೆಲಸ ಮಾಡ್ತಿದೆ. ನಮ್ಮ ಸಂಕಷ್ಟಕ್ಕೆ ಬಾರದೆ ಕರ್ನಾಟಕವನ್ನ ತುಳಿಯುತ್ತಿದೆ ಕೇಂದ್ರ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನಿಮಗೆ ಕರ್ನಾಟಕದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಮೇಕೆದಾಟು, ಮಾಹದಾಯಿ, ಭದ್ರಾ ಯೋಜನೆಗೆ ಪರ್ಮಿಷನ್ ಕೊಡಿಸಿ. ಹಣವನ್ನೂ ನಾವೇ ತರ್ತೀವಿ, ಅಣೆಕಟ್ಟು ಕೂಡ ನಾವೇ ಕಟ್ತೀವಿ. ರಾಜ್ಯಕ್ಕೆ ಬರಬೇಕಾದ ಬರಪರಿಹಾರ ಕೊಡಿಸಿ ಸಾಕು.
ಆಗ ನಾನು ನಿಮ್ಮನ್ನ ಒಪ್ಪಿಕೊಳ್ಳುತ್ತೇನೆ ಎಂದು ಬಿಜೆಪಿ-ಜೆಡಿಎಸ್ ನಾಯಕರಿಗೆ ಕೃಷ್ಣಭೈರೇಗೌಡ ಸವಾಲ್ ಹಾಕಿದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0