ವಿದ್ಯಾರ್ಥಿಗಳು ಪುಸ್ತಕದ ಶಿಕ್ಷಣದ ಜೊತೆಗೆ ಸಂಸ್ಕಾರದ ಜ್ಞಾನವನ್ನು ಕೂಡ ಕಲಿಯಬೇಕು ಎಂದು ಗದುಗಿನ ಶ್ರೀ ಬೀರೇಶ್ವರ ಪುಣ್ಯ ಶ್ರಮದ ಪೂಜ್ಯರಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ವಿದ್ಯಾರ್ಥಿಗಳು ಪುಸ್ತಕದ ಶಿಕ್ಷಣದ ಜೊತೆಗೆ ಸಂಸ್ಕಾರದ ಜ್ಞಾನವನ್ನು ಕೂಡ ಕಲಿಯಬೇಕು ಎಂದು ಗದುಗಿನ ಶ್ರೀ ಬೀರೇಶ್ವರ ಪುಣ್ಯ ಶ್ರಮದ ಪೂಜ್ಯರಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ಕುಕನೂರು :
ವಿದ್ಯಾರ್ಥಿಗಳು ಪುಸ್ತಕದ ಶಿಕ್ಷಣದ ಜೊತೆಗೆ ಸಂಸ್ಕಾರದ ಜ್ಞಾನವನ್ನು ಕೂಡ ಕಲಿಯಬೇಕು ಎಂದು ಗದುಗಿನ ಶ್ರೀ ಬೀರೇಶ್ವರ ಪುಣ್ಯ ಶ್ರಮದ ಪೂಜ್ಯರಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ಕುಕನೂರು ಪಟ್ಟಣದ ಮೂಡಬಿದ್ರೆ ಕ್ಲಾಸಸ್ ನವೋದಯ ತರಬೇತಿ ಕೇಂದ್ರ ಕುಕನೂರು ಅವರು ಆಯೋಜಿಸಿದ್ದ ಬೇಸಿಗೆ ಶಿಬಿರದ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಗದುಗಿನ ಶ್ರೀ ಬೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಕಲ್ಲಯ್ಯಜ್ಜನವರ 2048ನೆಯ ತುಲಾಭಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯರು ಇಂದಿನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ಮಕ್ಕಳು ಕೇವಲ ಪಠ್ಯ ಪುಸ್ತಕಗಳಲ್ಲಿನ ಶಿಕ್ಷಣ ಪಡೆಯುವ ಭರದಲ್ಲಿ ನಮ್ಮ ದೇಶದ ಆಚಾರ ,ವಿಚಾರ, ಸಂಸ್ಕೃತಿ ,ಸಂಸ್ಕಾರವನ್ನು ಮರೆಯುತ್ತಿದ್ದಾರೆ, ಮಕ್ಕಳ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಶಿಕ್ಷಣದ ಜೊತೆಗೆ ಸಂಸ್ಕಾರವು ಅಷ್ಟೇ ಅವಶ್ಯಕವಾಗಿರುತ್ತದೆ.
ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡುವ ಪರಿಪಾಠ ರೂಡಿಸಿಕೊಳ್ಳಬೇಕು ಅಂದಾಗ ಮಾತ್ರ ಮಕ್ಕಳು ತಮ್ಮ ಭವಿಷ್ಯದ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಪಟ್ಟಣದ ಪ್ರಮುಖರು, ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಶಿಬಿರಾರ್ಥಿಗಳು, ಮತ್ತು ಪಾಲಕರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0