ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.
ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.
ಗಜೇಂದ್ರಗಡ :
ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.
ನಗರ ಸೇರಿದಂತೆ ಹಲವಾರು ಗ್ರಾಮಗಳ ಪಕ್ಷದ ಕಾರ್ಯಕರ್ತರು ಸೇರಿದ್ದರು. ಈ ರೋಡ್ ಶೋ ಗಜೇಂದ್ರಗಡದ ಹೃದಯಭಾಗವಾದ ಮೈಸೂರು ಸಂಸ್ಥಾನ ಮಠದಿಂದ ಪ್ರಾರಂಭಗೊಂಡು ಬಸವೇಶ್ವರರ ವೃತ್ತ, ಬಜರಂಗದಳ ವೃತ, ಕೊಳ್ಳೆಯವರ ಕತ್ರಿ, ಕಟ್ಟಿ ಬಸವೇಶ್ವರ ರಂಗಮಂದಿರ, ಹಿರೇಬಜಾರ, ದುರ್ಗಾ ವೃತ್ತದಲ್ಲಿ ಸಭೆ ಸೇರಿ ಸಾರ್ವಜನಿಕ ಭಾಷಣ ಮಾಡುವ ಮೂಲಕ ತಮ್ಮ ಪಕ್ಷದ ಪ್ರಣಾಳಿಕೆ ಧ್ಯೇಯ ಉದ್ದೇಶ ತಿಳಿಸಿ ಮತ ಸೇಳೆಯುವಲ್ಲಿ ಅಬ್ಬರದ, ಬಿರುಸಿನ ಭಾಷಣದಲ್ಲಿ ಹಲವಾರು ನಾಯಕರು ಮತಯಾಚನೆ ಮಾಡುವ ಮೂಲಕ ರೋಡ್ ಶೋ ಗೆ ಹಾಗೂ ಅಂತಿಮ ಸಾರ್ವಜನಿಕ ಸಮಾರಂಭಕ್ಕೆ ತೆರೆಬಿದ್ದಿತು.
ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ.ಎಸ್.ಪಾಟೀಲ ಮಾತನಾಡಿ ಈ ರೋಡ ಶೋ ಮೂಲಕ ತಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಇದೇ ನಿಮ್ಮ ಪ್ರೀತಿ ವಿಶ್ವಾಸ ಮೇ ೧೦ ರಂದು ನಡೆಯುವ ಮತದಾನದಲ್ಲಿ ಕೂಡ ನನ್ನನ್ನ ಗೆಲ್ಲಿಸುವಲ್ಲಿ ತಾವೆಲ್ಲರೂ ಮುಂಚೂಣಿಯಲ್ಲಿರುತ್ತೀರಿ ಎಂದು ಭಾವಿಸಿದ್ದೇನೆ. ಎಲ್ಲಾ ಸಮುದಾಯದ ಜನರು ಪ್ರೀತಿಯಿಂದ ನನ್ನನ್ನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರಲ್ಲದೇ ನನ್ನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂಬ ವಿನಂತಿಯು ಭಾಷಣದುದ್ದಕ್ಕೂ ಕೇಳಿ ಬಂದಿತ್ತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ಬಂಡಿ, ಶಿವರಾಜ ಘೋರ್ಪಡೆ, ಟಿ.ಈಶ್ವರ, ಎಚ್.ಎಸ್.ಸೊಂಪೂರ, ಅಶೋಕಕುಮಾರ ಬಾಗಮಾರ, ಸುಭಾನಸಾಬ ಆರಗಿದ್ದಿ, ಎ.ಡಿ.ಕೋಲಕಾರ, ಚಂಬಣ್ಣ ಚವಡಿ, ರಫೀಕ ತೊರಗಲ್, ವೀರಣ್ಣ ಶೆಟ್ಟರ, ಬಸವರಾಜ ಹೂಗಾರ, ಮುರ್ತುಜಾ ಡಾಲಾಯತ, ಬಸವರಾಜ ಚನ್ನಿ, ಅರಿಹಂತ ಭಾಗಮಾರ, ಅಂದಪ್ಪ ರಾಠೋಡ, ಮಂಜುಳಾ ರೇವಡಿ, ಮಂಗಳಾದೇವಿ ದೇಶಮುಖ್, ಸುಮಂಗಲಾ ಇಟಗಿ, ಶಾರದಾ ರಾಠೋಡ, ನೀಲಮ್ಮ ಬಳೂಟಗಿ, ಶಶಿಧರ ಹೂಗಾರ, ಉಮೇಶ ರಾಠೋಡ, ಪ್ರಭು ಚವಡಿ, ರಾಜು ಆರಗಿದ್ದಿ, ರಾಜೂ ಸಾಂಗ್ಲೀಕರ್, ರೇಣಪ್ಪ ಇಂಗಳೆ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0