ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲತಾವರಗೇರಾ ಗ್ರಾಮ ಪಂಚಾಯತ್
ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲತಾವರಗೇರಾ ಗ್ರಾಮ ಪಂಚಾಯತ್
ಕೊಪ್ಪಳ :
ಮಹಾತ್ಮ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲತಾವರಗೇರಾ ಗ್ರಾಮ ಪಂಚಾಯತಿಯಲ್ಲಿ ಅನುಷ್ಠಾನಿಸಿದ ಅಮೃತ ಸರೋವರ ಕೆರೆಗಳನ್ನು ದಿನಾಂಕ:09-06-2023ರಂದು ರಾಜ್ಯಮಟ್ಟದ ಗ್ರಾಮೀಣಾಭಿವೃದ್ದಿ ಆಯುಕ್ತಾಲಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಡಳಿತ ಸಹಾಯಕ ನಿರ್ದೇಶಕರಾದ ಜಗದೀಶ್ ಕೆ.ಎಸ್, ರಾಜ್ಯ ಗುಣನಿಯಂತ್ರಕರಾದ ಎಸ್.ಎಂ ರುದ್ರಸ್ವಾಮಿ ಒಳಗೊಂಡ ತಂಡವು ಕಲ್ಲತಾವರಗೇರಾ ಗ್ರಾಮದ ಓಬಳಪ್ಪನ ಕೆರೆ ಹಾಗು ದನಕನದೊಡ್ಡಿ ಗ್ರಾಮದ ಕೆರೆ ಸ್ಥಳಕ್ಕೆ ಭೇಟಿ ನೀಡಿತು.
2022-23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಲ್ಲತಾವರಗೇರಾ ಗ್ರಾಮದ ಓಬಳಪ್ಪನ ಕೆರೆಯನ್ನು ಗ್ರಾಮ ಪಂಚಾಯತಿಯಿಂದ ಉದ್ಯೋಗ ಖಾತ್ರಿ ಕೆಲಸ ನೀಡಿ ಕೆರೆ ಉನ್ನತಿಕರಣ, ಅಮೃತ ಸರೋವರ ಯೋಜನೆ ಅಡಿಯಲ್ಲಿ ಕಾಮಗಾರಿ ನಡೆಸಿ, NMMS App ಬಳಕೆ, ಕೂಲಿ ಪಾವತಿಯಾಗುತ್ತಿರುವ ಕುರಿತು ಸವಿವರವಾಗಿ ರಾಜ್ಯ ಮಟ್ಟದ ಅಧಿಕಾರಿಗಳ ತಂಡವು ಕೂಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರೊಂದಿಗೆ ಚರ್ಚಿಸಿದರು. ಕೆರೆ ಹೂಳೆತ್ತಿರುವ ಪ್ರಮಾಣವನ್ನು ಪರಿಶೀಲಿಸಿದರು. ಕೆರೆಯ ಬದು ಸುತ್ತಲೂ ಸಸಿಗಳನ್ನು ನೆಡುವಿಕೆ ಸಣ್ಣ-ಪುಟ್ಟ ಇತ್ಯಾದಿ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿರೆಂದು ಸ್ಥಳದಲ್ಲಿ ಹಾಜರಿದ್ದ ಪಂಚಾಯತ ಅಭಿವೃದ್ದಿ ತಾಂತ್ರಿಕ ಸಂಯೋಜಕರು ಹಾಗು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಕೆರೆ ಹೂಳೆತ್ತುವದರಿಂದ ಕೂಲಿಕಾರರಿಗೆ ಕೂಲಿ ಕೆಲಸ ನೀಡುವದಲ್ಲದೇ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಅಚ್ಚುಕಟ್ಟಾಗಿ ಲೆವೆಲಿಂಗ್ ಮಾಡಬೇಕೆಂದು ಸೂಚಿಸಿದರು. ಕೆರೆ ಬಳಕೆದಾರರ ಸಂಘಗಳ ಜೊತೆ, ಕೆರೆಯ ಸುತ್ತಲೂ ಇರುವ ರೈತರಿಗೆ ಉಪಯೋಗವಾಗುವ ಕುರಿತು ಮಾಹಿತಿ ಪಡೆಯಿತು. ಕೆರೆ ಕಾಮಗಾರಿಯಲ್ಲಿ ಕೂಲಿ ಕೆಲಸ ನೀಡಿರುವ ತಂಡವು ಮೆಚ್ಚುಗೆ ವ್ಯಕ್ತಪಡಿಸಿತು.
ಪರಿಶೀಲನೆ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕಿ ಸೌಮ್ಯ ಕೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುಳಾ ವೀರಣ್ಣ ಹುಣಶಿಹಾಳ, ಜಿಲ್ಲಾ ಪಂಚಾಯತಿ ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಪಂಚಾಯತ ಅಭಿವೃದ್ದಿ ಅಧಿಕಾರಿ ಯಮನೂರಪ್ಪ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಂತ್ರಿಕ ಸಹಾಯಕ ಬಿ.ಶರಣಯ್ಯಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ ಗುಳದಳ್ಳಿ, ಕರವಸೂಲಿಗಾರ ನಾಗರಾಜ, ಬೇರ್ ಪೂಟ್ ಟೆಕ್ನಿಷಿಯನ್ ರಾಮಣ್ಣ ಕುಟುಗನಹಳ್ಳಿ, ಗ್ರಾಮ ಕಾಯಕ ಮಿತ್ರ ಯಂಕಮ್ಮ, ಸಿಬ್ಬಂದಿಗಳಾದ ಲಕ್ಷ್ಮಣ ಹಿರೇಮನಿ, ಮಲ್ಲಪ್ಪ ಹಾಜರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0