ನೆರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನಗಳಿಗೆ ಮಾತ್ರವಲ್ಲದೇ ಪದವಿದರ ವಿದ್ಯಾರ್ಥಿಗಳು ಮತ್ತು ಪದವಿದರ ನಿರುದ್ಯೋಗ ಯುವಕ ಯುವತಿಯರ ಬದುಕು ನಡೆಸಲು ನೆರೇಗಾ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ನೆರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನಗಳಿಗೆ ಮಾತ್ರವಲ್ಲದೇ ಪದವಿದರ ವಿದ್ಯಾರ್ಥಿಗಳು ಮತ್ತು ಪದವಿದರ ನಿರುದ್ಯೋಗ ಯುವಕ ಯುವತಿಯರ ಬದುಕು ನಡೆಸಲು ನೆರೇಗಾ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ಕುಕನೂರು :
ನೆರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನಗಳಿಗೆ ಮಾತ್ರವಲ್ಲದೇ ಪದವಿದರ ವಿದ್ಯಾರ್ಥಿಗಳು ಮತ್ತು ಪದವಿದರ ನಿರುದ್ಯೋಗ ಯುವಕ ಯುವತಿಯರ ಬದುಕು ನಡೆಸಲು ನೆರೇಗಾ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ಕುಕನೂರು ಪಟ್ಟಣದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ನೆರೇಗಾ ಗ್ರಾಮೀಣ ಪ್ರದೇಶದ ಜನರ ಜೀವನೋಪಾಯಕ್ಕೆ ಆಸರೆಯಾಗಿ ಹಳ್ಳಿಗಳ ಜನ ದೊಡ್ಡ ದೊಡ್ಡ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶಗಳ ನೀರಿನ ಮೂಲಗಳಾದ ನಾಲಾ ಸುಧಾರಣೆ ಕೆರೆ ಹೂಳೆತ್ತುವುದು ಹೊಲಗಳಿಗೆ ಬದು ನಿರ್ಮಾಣ ದಂತಹ ಕಾಮಗಾರಿಗಳ ಮೂಲಕ ಜನರಿಗೆ ಉದ್ಯೋಗದ ಜೊತೆಗೆ ಜಲ ಸಂಪನ್ಮೂಲ ಗಳನ್ನು ಉಳಿಸಿ ಪುರುಷ ಮತ್ತು ಮಹಿಳೆ ಕಾರ್ಮಿಕರಿಗೆ ಸಮಾನ ಕೂಲಿ ಕೊಡುವ ಮೂಲಕ ಜೀವನ ನಡೆಸಲು ಸಹಕಾರಿಯಾಗಲಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಸಾಮಾನ್ಯವಾದಿ ಆರ್ಥಿಕವಾಗಿ ಸದೃಢವಾಗಿರುವುದಿಲ್ಲ, ದುಬಾರಿ ಕಾಲದಲ್ಲಿ ಮಡದಿ ಮತ್ತು ಮಕ್ಕಳ ಹೊಟ್ಟೆ ಪಾಡು ನಡೆಸುವುದೇ ಅವರಿಗೆ ದೊಡ್ಡದಾಗಿರುತ್ತದೆ , ಅಂತದರಲ್ಲಿ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದು ಕುಟುಂಬದ ಮುಖ್ಯಸ್ಥರಿಗೆ ಒಂದು ಕಷ್ಟಸಾಧ್ಯವಾದ ಕೆಲಸ. ಅದಕ್ಕಾಗಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ವಿಧ್ಯಾಭ್ಯಾಸದ ಪ್ರಮಾಣ, ಪ್ರಾಥಮಿಕ ಹಂತದಲ್ಲಿ ಶೇ 100% ಇದ್ದರೆ ಅದು ಪದವಿ ಮತ್ತು ಸ್ನಾತಕೊತ್ತರ ಪದವಿಗಳಿಗೆ ಹೋಲಿಕೆ ಮಾಡಿದರೆ ಶೇಕಡಾ 50% ಗಿಂತ ಕಡಿಮೆ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬನೆ ಇಲ್ಲದಿರುವುದು ಸಾಕ್ಷಿಯಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಸ್ವಾವಲಂಬನೆ ಜೊತೆಗೆ ಗ್ರಾಮೀಣ ಪ್ರದೇಶದ ವಿಧ್ಯಾವಂತ ನಿರುದ್ಯೋಗಿಗಳಿಗೂ ವರವಾಗಿದೆ ಅದಕ್ಕೆ ತಾಜಾ ಉದಾಹರಣೆ ಎಂದರೆ ಜಿಲ್ಲೆಯ ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿ ವಿಧ್ಯಾವಂತ ನಿರುದ್ಯೋಗಿಯಾಗಿರುವ ಮಾರುತಿ ಶೇಖ್ರಪ್ಪ ಈಳಿಗೇರ ರವರು ಉದ್ಯೋಗ ಖಾತ್ರಿ ಹಣದಲ್ಲಿ ದೂರದ ಬಿಜಾಪೂರ ಜಿಲ್ಲೆಯಲ್ಲಿ ಕೋಚಿಂಗ್ ಪಡೆಯಲು ಮತ್ತು ಪಠ್ಯ ಪುಸ್ತಕ ಗಳನ್ನು ಕರಿದಿಸಲು ನರೇಗಾ ಹಣ ಬಳಕೆ ಮಾಡಿದ್ದಾರೆ, ಪುಸ್ತಕ ಖರೀದಿಸಲು ನರೇಗಾ ಹಣ ಬಳಕೆ ಮಾಡಿದ್ದಾರೆ. ತಂದೆ, ತಾಯಿ ಒಬ್ಬನೇ ಮಗನಾದರೂ ಓದಿನಲ್ಲಿ ಸದಾ ಮುಂದೆ ಇದ್ದುದರಿಂದ ತಂದೆ ತಾಯಿ ಇಬ್ಬರೂ ಮಾರುತಿಯ ಓದಿಗೆ ಮೊದಲಿಂದಲೂ ಸಹಾಯ ಮಾಡುತ್ತಾ ಬಂದಿದ್ದಾರೆ.
ಮಾರುತಿ ಈಳಗೇರ ಇವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2019-20ನೇ ಸಾಲಿನಲ್ಲಿ ರೂ. 12948, 2020-21 ರಲ್ಲಿ ರೂ. 24770, 2021 -22 ರಲ್ಲಿ ರೂ. 18322, 2022-23 ರಲ್ಲಿ ರೂ. 8961, 2023-24 ರಲ್ಲಿ ರೂ 10025 ನಿರಂತರವಾಗಿ ಕೂಲಿ ಕೆಲಸವನ್ನು ತುತ್ತಿನ ಚೀಲ ತುಂಬಸಿಸುವುದರ ಜ್ಯೋತೆಗೆ ಬದುಕಿನ ಬಂಡಿಯನ್ನು ಸಾಗಿಸುತ್ತಾ, ಓದಿನಲ್ಲೂ ಸಾಧನೆ ಮಾಡುತ್ತಿದ್ದಾರೆ.
ಕುದರಿಮೋತಿ ಗ್ರಾಮ ಪಂಚಾಯತಿಯಲ್ಲಿ 1177 ಕ್ರಿಯಾ ಶೀಲ ಜಾಬ್ ಕಾರ್ಡ ಇದ್ದು, 3054 ಕೂಲಿಕಾರರು ಇದ್ದಾರೆ. ಇದು ವರೆಗೂ 20, 462 ಮಾನವ ದಿನಗಳನ್ನು ಸೃಜನೆ ಮಾಡಿದ್ದು, ಅಕುಶಲ ಕೂಲಿಕಾರರ ಜ್ಯೋತೆಗೆ, ವಿಶೇಷ ಚೇತನರು, ಮಹಿಳೆಯರು, ಹಿರಿಯ ನಾಗರೀಕರೂ ಮತ್ತು ವಿಧ್ಯಾವಂತ ನಿರುದ್ಯೋಗಿಗಳಿಗೂ ಸಹ ಯೋಜನೆ ದುಡಿಯಲು ಅವಕಾಶ ಕೊಟ್ಟಿದೆ ಇದರಿಂದಾಗಿ ಗ್ರಾಮದ ಕೂಲಿಕಾರರು ಬೆಸಿಗೆಯ ಸಮಯದಲ್ಲಿ ಹೆಚ್ಚು ಕೂಲಿ ಕೆಲಸದ ಮಾಡಿ ಬಂದ ಕೂಲಿ ಹಣವನ್ನು ತಮ್ಮ ದೈನಂದಿನ ಅವಶ್ಯಕತೆಗಳಿಗೆ ಬಳಸುತ್ತಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು, ಗ್ರಾಮೀಣ ಪ್ರದೇಶದ ಕೂಲಿಕಾರರು ಅವರ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಮಾರ್ಗ, ಇದರ ಜ್ಯೋತೆಗೆ ವಿಧ್ಯಾವಂತ ನಿರುದ್ಯೋಗಿಗಳಿಗೂ ಈ ಯೋಜನೆಯಲ್ಲಿ ದುಡಿಯಲು ಅವಕಾಶ, ದುಡಿಮೆಗೆ ತಕ್ಕ ಕೂಲಿ, ಗೌರವಯುತವಾದ ಬದುಕು ಸಾಗಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ ಎಂದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0