ಮಾನವ ಸಂಕುಲ ಆರೋಗ್ಯ ಕರ ಜೀವನ ನಡೆಸಲು ಪರಿಸರ ತುಂಬಾ ಸಹಕಾರಿಯಾಗಿವೆ ಕಲುಷಿತ ರಹಿತ ಗಾಳಿ ಸೇವನೆಗೆ ಸಸ್ಯಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡುವುದು,ಸುಂದರ ಪರಿಸರದಿಂದ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕುಕನೂರು- ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ಹೇಳಿದರು.
ಯಲಬುರ್ಗಾ :
ಮಾನವ ಸಂಕುಲ ಆರೋಗ್ಯ ಕರ ಜೀವನ ನಡೆಸಲು ಪರಿಸರ ತುಂಬಾ ಸಹಕಾರಿಯಾಗಿವೆ ಕಲುಷಿತ ರಹಿತ ಗಾಳಿ ಸೇವನೆಗೆ ಸಸ್ಯಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡುವುದು,ಸುಂದರ ಪರಿಸರದಿಂದ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕುಕನೂರು- ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಸಿ ನೆಡುವ ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಕುಕನೂರು- ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ಸಹ ಸಸಿ ನೆಡುವ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭೂಮಿಯ ಮೇಲೆ ನಡೆಯುವ ವೈಪರೀತ್ಯಗಳಿಂದ, ಜಾಗತಿಕ ತಾಪಮಾನ ಏರಿಕೆ,ಹತಿವೃಷ್ಠಿ ಅನಾವೃಷ್ಟಿಗಳಿಂದ ಭೂಮಿಯ ಮೇಲಿನ ಸರ್ವ ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಕಾಪಾಡಿಕೊಳ್ಳಲು ಪರಿಸರವನ್ನು ಉಳಿಸಿಕೊಳ್ಳವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಅದಕ್ಕಾಗಿ ಎಲ್ಲರೂ ಸೇರಿ ಸಸಿ ನೆಡುವುದರೊಂದಿಗೆ ಅವುಗಳ ಪಾಲನೆ ಪೋಷಣೆ ಮಾಡುವ ಮೂಲಕ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು,ಸುಂದರ ಪರಿಸರ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರತ್ನಮ್ಮ ವಣಗೇರಿ, ಶರಣಯ್ಯ ಹಾಳಕೇರಿ ,ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶಿವಯೋಗಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶರಬಸಪ್ಪ ಬಿಲ್ಲರ್, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸುಮಂಗಲ ತೊಂಡಿಹಾಳ, ಪಿಡಿಒ ನಾಗೇಶ ನಾಯಕ, ಸದಸ್ಯರಾದ ಕಳಕಪ್ಪ ದುಗಲದ, ಶರಣಪ್ಪ ಅಂಗಡಿ, ರಾಮಪ್ಪ ಹೋರಪೇಟೆ, ಬಸಪ್ಪ ತೊಂಡಿಹಾಳ, ಮಂಜು , ಬಸವರಾಜ ರೊಟ್ಟಿ, ಯಮನೂರಪ್ಪ ಭಜಂತ್ರಿ, ಕಳಕವ್ವ ಅಡಗೂಡನ್, ಮುಂತಾದವರು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
ಠೀಕೆಗಳು 0