ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರ (Congress Government) ಶನಿವಾರ ಅಸ್ತಿತ್ವಕ್ಕೆ ಬಂದಿದೆ. ಇದರಂತೆ, ಹೊಸ ಸರ್ಕಾರ ಇಂದಿನಿಂದ (ಮೇ22) ಮೂರು ದಿನಗಳಕಾಲ ಕರ್ನಾಟ ವಿಧಾಸಭಾ ಅಧಿವೇಶನವನ್ನು ನಡೆಸಲಿದೆ. ಇದು ಕಾಂಗ್ರೆಸ್‌ ಸರ್ಕಾರದ ಮೊದಲ ವಿಧಾನಸಭಾ ಕಲಾಪವಾಗಿದ್ದು, ಇದ್ರಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಮತ್ತು ವಿಧಾನಸಭಾ ಸ್ಪೀಕರ್‌ ಆಯ್ಕೆ ಈ ಅಧಿವೇಶನ ಮುಖ್ಯ ಕಾರ್ಯಸೂಚಿಯಾಗಿದೆ.