ಬಸವರಾಜ ರಾಯರೆಡ್ಡಿ ಅವರ 18 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಬಸವರಾಜ ರಾಯರೆಡ್ಡಿ ಅವರನ್ನು ಅತಿಹೆಚ್ಚಿನ ಅಂತರದ ಮತಗಳಿಂದ ಆಯ್ಕೆ ಮಾಡಿದ್ದಾರೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹರ್ಷ ವ್ಯಕ್ತಪಡಿಸಿದರು.
ಬಸವರಾಜ ರಾಯರೆಡ್ಡಿ ಅವರ 18 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಬಸವರಾಜ ರಾಯರೆಡ್ಡಿ ಅವರನ್ನು ಅತಿಹೆಚ್ಚಿನ ಅಂತರದ ಮತಗಳಿಂದ ಆಯ್ಕೆ ಮಾಡಿದ್ದಾರೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹರ್ಷ ವ್ಯಕ್ತಪಡಿಸಿದರು.
ಕುಕನೂರು :
ಬಸವರಾಜ ರಾಯರೆಡ್ಡಿ ಅವರ 18 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಬಸವರಾಜ ರಾಯರೆಡ್ಡಿ ಅವರನ್ನು ಅತಿಹೆಚ್ಚಿನ ಅಂತರದ ಮತಗಳಿಂದ ಆಯ್ಕೆ ಮಾಡಿದ್ದಾರೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಹೆಚ್ಎಂಹೆಚ್ ಮಿಲ್ಲಿನಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬಸವರಾಜ ಉಳ್ಳಾಗಡ್ಡಿ ಮಾತನಾಡುತ್ತಾ ಭಾರತೀಯ ಜನತಾ ಪಕ್ಷದ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, 40% ಕಮಿಷನ್, ಜಾತಿ ರಾಜಕಾರಣ, ದ್ವೇಷ ರಾಜಕಾರಣಗಳಂತಹ ಲೋಪದೋಷಗಳಿಂದ ಬೇಸತ್ತ ಕ್ಷೇತ್ರದ ಮತದಾರ ಹಾಗೂ ರಾಜ್ಯದ ಮತದಾರರಪ್ರಭುಗಳು ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜಯವನ್ನು ನೀಡಿದ್ದಾರೆ. ಬಸವರಾಜ ರಾಯರೆಡ್ಡಿ ಮತ್ತು ಪಕ್ಷದ ವತಿಯಿಂದ ಯಲಬುರ್ಗಾ ಮತಕ್ಷೇತ್ರದ ಸಮಸ್ತ ಮತದಾರ ಪ್ರಭುಗಳಗೆ ಕೃತಜ್ಞತೆಯನ್ನು ಸಲ್ಲಿಸಿದರು.
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ದೂರ ದೃಷ್ಟಿಯುಳ್ಳ ರಾಜಕಾರಣಿ ಬಸವರಾಜ ರಾಯರೆಡ್ಡಿ ಅವರಿಗೆ ಮುಂದೆ ರಚನೆ ಆಗಲಿರುವ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡುವುದರಿಂದ ಕ್ಷೇತ್ರಕ್ಕೆ ಮಾತ್ರವಲ್ಲ ರಾಜ್ಯ ಹಾಗೂ ಪಕ್ಷ ಮತ್ತು ಸರ್ಕಾರಕ್ಕೂ ಉತ್ತಮ ಬೆಳವಣಿಗೆಯೊಂದಿಗೆ ಒಳ್ಳೆಯ ಹೆಸರು ಸಿಗುವುದರಲ್ಲಿ ಅನುಮಾನವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಅತ್ಯಾದ್ಭುತ ಯೋಜನೆಗಳನ್ನು ಜಾರಿಗೆ ತರುವ ಗ್ಯಾರಂಟಿ ಕಾರ್ಡ ಗಳೊಂದಿಗೆ ಮತಯಾಚನೆ ಮಾಡಿದ್ದು ಇದೀಗ ಜನ ನೀಡಿರುವ ಸ್ಪಂದನೆಗೆ ತಲೆಬಾಗಿ ಅತಿ ಶೀಘ್ರದಲ್ಲೇ ಗ್ಯಾರಂಟಿಯಾಗಿ ನೀಡಿರುವ ಯೋಜನೆಗಳಿಗೆ ಚಾಲನೆ ನೀಡಿ ರಾಜ್ಯದ ಜನತೆಯ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ವೆಂಕಣ್ಣ ಯರಾಶಿ ಮಾತನಾಡುತ್ತಾ ಈ ಬಾರಿಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಹಣ ಮತ್ತು ಅಭಿವೃದ್ಧಿಯ ಎಂಬ ಮಾನದಂಡದಲ್ಲಿ ಚುನಾವಣೆ ಜರುಗಿದ್ದು ಕ್ಷೇತ್ರದ ಬುದ್ಧಿವಂತ ಮತದಾರ ಹಣವನ್ನು ಪಕ್ಕಕ್ಕಿಟ್ಟು ಅಭಿವೃದ್ಧಿಗಾಗಿ ಮತ ಚಲಾವಣೆ ಮಾಡಿರುವುದು ಫಲಿತಾಂಶದಿಂದ ಗೊತ್ತಾಗಿರುತ್ತದೆ ಹಾಗೂ ಹಣಕ್ಕಿಂತ ಅಭಿವೃದ್ಧಿಯ ಮುಖ್ಯ ಎಂದು ಇಡೀ ರಾಜ್ಯಕ್ಕೆ ಯಲಬುರ್ಗಾ ವಿಧಾನಸಭಾ ಕ್ಷೇತ್ರ ತೋರಿಸಿ ಮಾದರಿಯಾಗಿದೆ ಎಂದು ಹೇಳಿದರು. ಚುನಾವಣಾ ಪ್ರಚಾರಕ್ಕೆಂದು ಗ್ರಾಮಗಳಿಗೆ ತೆರಳಿದಾಗ ಸ್ವತಹ ಗ್ರಾಮಸ್ಥರೇ ನಮ್ಮ ಹತ್ತಿರ ಬಂದು ಕಳೆದ ಬಾರಿಯ 2018ರ ಚುನಾವಣೆಯಲ್ಲಿ ಅಭಿವೃದ್ಧಿಯ ಹರಿಕಾರರಾದ ಬಸವರಾಜ ರಾಯರೆಡ್ಡಿ ಅವರನ್ನು ಸೋಲಿಸಿ ಪಶ್ಚಾತಾಪ ಪಟ್ಟಿದ್ದೇವೆ ಆದ್ದರಿಂದ ಈ ಬಾರಿ ಪ್ರಾಮಾಣಿಕವಾಗಿ ರಾಯರೆಡ್ಡಿ ಅವರಿಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದರು ಹಾಗೂ ಅದರಂತೆ ನಡೆದುಕೊಂಡು ಅಭೂತಪೂರ್ವ ಜಯವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತಗೌಡ ಚಂಡೂರ್, ಸಂಗಮೇಶ ಗುತ್ತಿ, ಮಂಜುನಾಥ್ ಕಡೆಮನಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಕಾಶಿಂಸಾಬ್ ತಳಕಲ್, ಸಂಗಮೇಶ್ ಗುತ್ತಿ, ರೆಹಮಾನ್ ಸಾಬ್ ಮಕಪ್ಪನವರ್, ವೀರಯ್ಯ ತೋಂಟದಾರ್ಯಮಠ,ಮಲ್ಲಿಕಾರ್ಜುನ ಬಿನ್ನಾಳ,ಗಗನ್ ನೋಟಗಾರ, ಸಿದ್ದಯ್ಯ ಕಳ್ಳಿಮಠ, ಸಿರಾಜುದ್ದೀನ್ ಕರಮುಡಿ, ಹಾಗೂ ಇತರರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0