ಹೆಚ್ಚುವರಿ ಡಿಸಿಎಂ ಆದ ಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ, ಹೆಚ್ಚುವರಿ ಡಿಸಿಎಂ ಆದರೆ ಡಿ.ಕೆ.ಶಿವಕುಮಾರ್ ಅವರ ಪೋರ್ಟ್ ಪೋಲಿಯೋ ಯಾರಾದರೂ ಕಿತ್ತುಕೊಳ್ತಾರಾ? ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಹೆಚ್ಚುವರಿ ಡಿಸಿಎಂ ಆದ ಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ, ಹೆಚ್ಚುವರಿ ಡಿಸಿಎಂ ಆದರೆ ಡಿ.ಕೆ.ಶಿವಕುಮಾರ್ ಅವರ ಪೋರ್ಟ್ ಪೋಲಿಯೋ ಯಾರಾದರೂ ಕಿತ್ತುಕೊಳ್ತಾರಾ? ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತುಮಕೂರು :
ಹೆಚ್ಚುವರಿ ಡಿಸಿಎಂ ಆದ ಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ, ಹೆಚ್ಚುವರಿ ಡಿಸಿಎಂ ಆದರೆ ಡಿ.ಕೆ.ಶಿವಕುಮಾರ್ ಅವರ ಪೋರ್ಟ್ ಪೋಲಿಯೋ ಯಾರಾದರೂ ಕಿತ್ತುಕೊಳ್ತಾರಾ? ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸುರ್ಜೇವಾಲ ಅವರೊಂದಿಗೆ ಸಭೆ ಇದ್ದು, 28 ಕ್ಷೇತ್ರದ ಚುನಾವಣಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ ಇಂದಿನಿಂದ ಆಗುತ್ತದೆ. ನಾಳೆನೂ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ದೆಹಲಿಯಲ್ಲಿ ಸಭೆ ನಡೆಯಲಿದೆ ಇವತ್ತಿನ ಸಭೆಯಲ್ಲಿ ಮೂವರು ಡಿಸಿಎಂ ವಿಚಾರ ಪ್ರಸ್ತಾಪ ಮಾಡಲ್ಲ ನಾಳೆ ದೆಹಲಿಯಲ್ಲಿ ಪರಿಸ್ಥಿತಿ ನೋಡಿ ಮುಂದುವರೆಯಲಾಗುವುದು. ಅವರು ಯಾವ ವಿಚಾರಕ್ಕೆ ಸಭೆ ಕರೆದಿದ್ದಾರೆ ಅನ್ನೋದರ ಮೇಲೆ ಡಿಸಿಎಂ ವಿಚಾರ ಪ್ರಸ್ತಾಪ ಮಾಡಬೇಕೋ ಬೇಡವೋ ಅನ್ನೋದು ನಿರ್ಧಾರವಾಗುತ್ತದೆ.
ಈಗಾಗಲೇ ಸುರ್ಜೆವಾಲರ ಗಮನಕ್ಕೆ ತಂದಿದ್ದೇವೆ. ಹೆಚ್ಚುವರಿ ಡಿಸಿಎಂ ಆದ ತಕ್ಷಣ ಯಾರೂ ಯಾರ ಪೋರ್ಟ್ ಪೋಲಿಯೋ ಕಿತ್ತುಕೊಳ್ಳಲ್ಲ. ಹೆಚ್ಚುವರಿ ಡಿಸಿಎಂ ಆದರೆ ಡಿಕೆಶಿ ಅವರ ಪೋರ್ಟ್ ಪೋಲಿಯೋ ಯಾರು ಕಿತ್ತುಕೊಳ್ತಾರಾ?. ಮೂವರು ಡಿಸಿಎಂಗೆ ಯಾವ ಶಾಸಕರೂ ವಿರೋಧ ಮಾಡಿಲ್ಲ. ತುಂಬಾ ಜನ ಮೌನವಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣ ಅಲ್ವಾ. ಹೀಗಾಗಿ ಎಲ್ಲರೂ ಪರವಾಗಿದ್ದಾರೆ ಅಂತಲೇ ಅರ್ಥ ಎಂದರು.
ಅಗತ್ಯ ಬಿದ್ರೆ ಸಚಿವರನ್ನು ಕಣಕ್ಕಿಳಿಸುವ ಸೂಚನೆ ಹೈ ಕಮಾಂಡ್ ನಿಂದ ಬಂದಿದೆ. ಆದರೆ ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಬದಲಾದ ಪರಿಸ್ಥಿತಿಯಲ್ಲಿ ನಿಲ್ಲಲ್ಲ ಮುದ್ದಹನುಮೇಗೌಡರು ಡಿಸಿಸಿ ಬ್ಯಾಂಕ್ ಸಾಲದ ಕುರಿತು ಭೇಟಿ ಮಾಡಿದ್ದಾರೆ. ಬೇರೆ ರಾಜಕೀಯ ಮಾತುಕತೆ ನಡೆದಿಲ್ಲಾ ಮುದ್ದಹನುಮೇಗೌಡ ಅಲ್ಲ ಯಾರು ಬೇಕಾದರೂ ಕಾಂಗ್ರೆಸ್ ಗೆ ಬರಬಹುದು. ವಿ.ಸೋಮಣ್ಣ ಕಾಂಗ್ರೆಸ್ ಬರುತ್ತಾರೆ. ಅನ್ನೋ ಊಹಾಪೋಹ ಇದೆ, ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ ಎಂಬ ಚರ್ಚೆನೂ ಇದೆ. ಜಯಚಂದ್ರರು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ. ಅವರ ಮಗನಿಗೆ ಅವಕಾಶ ಕೊಟ್ಟರೆ ಕೊಡಲಿ. ಸಿಎಂ ಐದು ವರ್ಷ ಪೂರೈಸುತ್ತಾರಾ ಎಂಬ ಪ್ರಶ್ನೆ?
ಸಿಎಂ ಸಿದ್ದರಾಮಯ್ಯ ಯಾಕೆ 5 ವರ್ಷ ಪೂರೈಸಬಾರದು ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಅವರು ಮುಂದುವರೆಯುತ್ತಾರೆ. ಗಣರಾಜ್ಯೋತ್ಸವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ಯಾಬ್ಲೋ ನಿರಾಕರಣೆ ವಿಚಾರ. ಕಳೆದ ವರ್ಷನೂ ನಾರಾಯಣ ಗುರು ಟ್ಯಾಬ್ಲೋ ನಿರಾಕರಣೆ ಮಾಡಿದ್ರು. ಅದಕ್ಕೆ ಜನ ತಕ್ಕ ಫಲಿತಾಂಶ ಕೊಟ್ಟಿದ್ದಾರೆ. ಈ ವರ್ಷಾನೂ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ಯಾಬ್ಲೋ ನಿರಾಕರಣೆ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಘೋರ ಅಪಮಾನ ಮುಂದಿನ ದಿನದಲ್ಲಿ ಗೋಡ್ಸೆ ಟ್ಯಾಬ್ಲೊಗೆ ಅವಕಾಶ ಕೊಟ್ಟರೂ ಕೊಡಬಹುದು.
ವರದಿ : ಚೈತ್ರಾ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0