ದೆಹಲಿ ಮುಖ್ಯಮಂತ್ರಿ ಆಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಮೇಲೆ ಸಮನ್ಸ್ ಜಾರಿ ಮಾಡುತ್ತಿದೆ. ಈಗಾಗಲೇ ಮೂರನೇ ಸಮನ್ಸ್ಗೂ ಅರವಿಂದ್ ಕೇಜ್ರಿವಾಲ್ ಡೋಂಟ್ಕೇರ್ ಮಾಸ್ಟರ್ ಆಗಿದ್ದಾರೆ. ಇದೀಗ ನಾಲ್ಕನೇ ಸಮನ್ಸ್ ಜಾರಿ ಮಾಡಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ದೆಹಲಿ ಲಿಕ್ಕರ್ ಗೇಟ್ ಕೇಸ್ನಲ್ಲಿ ಅರೆಸ್ಟ್ ಆಗ್ತಾರಾ..?
ದೆಹಲಿ :
ದೆಹಲಿ ಮುಖ್ಯಮಂತ್ರಿ ಆಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಮೇಲೆ ಸಮನ್ಸ್ ಜಾರಿ ಮಾಡುತ್ತಿದೆ. ಈಗಾಗಲೇ ಮೂರನೇ ಸಮನ್ಸ್ಗೂ ಅರವಿಂದ್ ಕೇಜ್ರಿವಾಲ್ ಡೋಂಟ್ಕೇರ್ ಮಾಸ್ಟರ್ ಆಗಿದ್ದಾರೆ. ಇದೀಗ ನಾಲ್ಕನೇ ಸಮನ್ಸ್ ಜಾರಿ ಮಾಡಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ದೆಹಲಿ ಲಿಕ್ಕರ್ ಗೇಟ್ ಕೇಸ್ನಲ್ಲಿ ಅರೆಸ್ಟ್ ಆಗ್ತಾರಾ..? ಅನ್ನೋ ಗುಮಾನಿ ಹುಟ್ಟುಹಾಕಿದೆ. ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಾರೆ. ಜೈಲು ಪಾಲಾದರೆ ಮುಂದಿನ ಸಿಎಂ ಯಾರಾಗುತ್ತಾರೆ..? ಜೈಲಿನಿಂದಲೇ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಾರಾ..? ಅನ್ನೋ ಚರ್ಚೆ ಶುರುವಾಗಿದೆ.
ಯಾವುದೇ ಕ್ಷಣದಲ್ಲಿ ಬಂಧನ ಆಗಬಹುದು – ಆಮ್ ಆದ್ಮಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾವಾಗ ಬೇಕಿದ್ದರೂ ಬಂಧನ ಆಗುವ ಸಾಧ್ಯತೆಯಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ನೇರ ಎದುರಾಳಿ ಆಗಿದ್ದು, ಲೋಕಸಭಾ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ಪ್ರಚಾರದಲ್ಲಿ ಭಾಗಿಯಾದರೆ ಬಿಜೆಪಿಗೆ ಹಿನ್ನಡೆ ಆಗುವ ಭೀತಿ ಎದುರಾಗಿದ್ದು, ಇದೇ ಕಾರಣಕ್ಕಾಗಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಮೂಲಕ ಬಂಧಿಸಿ ಜೈಲಿನಲ್ಲಿ ಇಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಮಕರ ಸಂಕ್ರಾಂತಿ ಒಳಗೆ ಅರವಿಂದ ಕೇಜ್ರಿವಾಲ್ ಅರೆಸ್ಟ್ ಆಗ್ತಾರೆ. ಕೇಜ್ರಿವಾಲ್ ಅವರನ್ನ ಬಂಧಿಸಿ ಜೈಲಿಗೆ ಹಾಕೋಕೆ ಮೋದಿ ಸರ್ಕಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ ಎನ್ನಲಾಗ್ತಿದೆ.
ಕೇಜ್ರಿವಾಲ್ ಮನೆ ಬಳಿ ಹೆಚ್ಚಾಗ್ತಿದೆ ಖಾಕಿ ಸರ್ಪಗಾವಲು!
ದೆಹಲಿ ಸಿಎಂ ಮನೆ ಎದುರಲ್ಲಿ ಪೊಲೀಸ್ರ ಜಮಾವಣೆ ಆಗಿದೆ. ದೆಹಲಿ ಕೇಂದ್ರಾಡಳಿತ ಪ್ರದೇಶ ಆಗಿರುವ ಕಾರಣ ಪೊಲೀಸ್ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅರವಿಂದ್ ಕೇಜ್ರಿವಾಲ್ ಮನೆಯ ಪ್ರಮುಖ ರಸ್ತೆಯ ಮುಖ್ಯದ್ವಾರದಲ್ಲಿ ಮೊಕ್ಕಾಂ ಹೂಡಿದ್ದು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಕೇಜ್ರಿವಾಲ್ ಭೇಟಿ ಬಂದವರನ್ನು ಪರಿಶೀಲನೆ ಮಾಡಿ ಬಿಡ್ತಿದ್ದು, ಪಾಸ್ ಇಲ್ಲದೆ ಇದ್ದವರನ್ನು ವಾಪಸ್ ಕಳುಹಿಸಲಾಗ್ತಿದೆ. ಇನ್ನು ದಿಢೀರ್ ಪೊಲೀಸ್ ಭದ್ರತೆ ಹೆಚ್ಚಳ ಆಗಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಮನೀಶ್ ಸಿಸೋಡಿಯಾ ಸೇರಿ ಅನೇಕ ನಾಯಕರನ್ನ ಇಡಿ ಅಧಿಕಾರಿಗಳು ಈಗಾಗಲೇ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. 2 ವರ್ಷಗಳಿಂದ ತನಿಖೆ ನಡೆಯುತ್ತಿದ್ದು, 8 ತಿಂಗಳ ಹಿಂದೆ ಕೇಜ್ರಿವಾಲ್ಗೆ ಸಿಬಿಐ ನೋಟಿಸ್ ಕೊಟ್ಟು ವಿಚಾರಣೆಯನ್ನೂ ಮಾಡಿತ್ತು. ಇದೀಗ ಜಾರಿ ನಿರ್ದೇಶನಾಲಯ 3 ಬಾರಿ ಸಮನ್ಸ್ ಕೊಟ್ಟಿದೆ. ಆದರೆ ವಿಚಾರಣೆಗೆ ಕೇಜ್ರಿವಾಲ್ ನಿರಾಕರಿಸಿದ್ದಾರೆ.
ಬಿಜೆಪಿ ಹೇಳ್ತಿರೋದೇನು..? ಮುಂದಿನ ಸಿಎಂ ಯಾರು..?
ಲಿಕ್ಕರ್ ಗೇಟ್ ಪ್ರಕರಣದಲ್ಲಿ ಹೈಡ್ರಾಮಾ ಮಾಡಲು ಅರವಿಂದ್ ಕೇಜ್ರಿವಾಲ್ ಯೋಜನೆ ರೂಪಿಸಿದ್ದಾರೆ ಅನ್ನೋದು ಬಿಜೆಪಿ ನಾಯಕರ ಆರೋಪ. ಜಾರಿ ನಿರ್ದೇಶನಾಲಯ ಜನವರಿ 3ರಂದು ಹಾಜರಾಗುವಂತೆ ನೋಟಿಸ್ ನೀಡಿತ್ತು. ಅದಕ್ಕೂ ಮೊದಲು ಕಳೆದ ನವೆಂಬರ್ 2 ಹಾಗು ಡಿಸೆಂಬರ್ 21ರಂದು ಹಾಜರಾಗುವಂತೆ ಸೂಚನೆ ಕೊಟ್ಟಿತ್ತು. ನಾಲ್ಕನೆ ಸಮನ್ಸ್ ಜೊತೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧನ ಮಾಡಲಾಗುತ್ತದೆ ಎನ್ನಲಾಗ್ತಿದ್ದು, ಒಂದು ವೇಳೆ ಕೇಜ್ರಿವಾಲ್ ಅರೆಸ್ಟ್ ಆದರೆ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಮುಖ್ಯಮಂತ್ರಿ ಮಾಡುತ್ತಾರೆ ಅನ್ನೋ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ದುಶ್ಯಂತ್ ಕುಮಾರ್ ಗೌತಮ್ ಮಾತನಾಡಿ, ಇಡಿ ಕೊಟ್ಟಿರುವ ನೋಟಿಸ್ ಕೊಟ್ಟಿರುವುದು ಸಂವಿಧಾನ ಬದ್ಧವಾಗಿದೆ. ನೀವು ವಿಚಾರಣೆಗೆ ಹಾಜರಾಗಿ ಎಂದು ಸಲಹೆ ನೀಡಿರುವ ಜೊತೆಗೆ ದೆಹಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಕೂರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಠೀಕೆಗಳು 0