ರಾಜ್ಯ ಕಂಡ ಧೀಮಂತ ನಾಯಕ, ಭಾಗ್ಯಗಳ ಸರದಾರ, ಹಸಿವು ಮುಕ್ತ ಕರ್ನಾಟಕದ ರೂವಾರಿ ಎಂದೇ ಪ್ರಖ್ಯಾತಿ ಪಡೆದ ಅಹಿಂದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಯನ್ನಾಗಿ ಘೋಷಣೆ ಮಾಡಿ ಮತ್ತು ಅಭಿವೃದ್ಧಿ ಹರಿಕಾರ ಬಸವರಾಜ ರಾಯರೆಡ್ಡಿ ಅವರನ್ನು ಕ್ಯಾಬಿನೇಟ್ ದರ್ಜೆ ಮಂತ್ರಿಯನ್ನಾಗಿ ಮಾಡಿ ಎಂದು ಬ್ಲಾಕ್ ಕಾಂಗ್ರೆಸ್ಸ್ ಕುಕನೂರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮಹೇಶ್ ಗಾವರಾಳ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ
ಕುಕನೂರು :
ರಾಜ್ಯ ಕಂಡ ಧೀಮಂತ ನಾಯಕ, ಭಾಗ್ಯಗಳ ಸರದಾರ, ಹಸಿವು ಮುಕ್ತ ಕರ್ನಾಟಕದ ರೂವಾರಿ ಎಂದೇ ಪ್ರಖ್ಯಾತಿ ಪಡೆದ ಅಹಿಂದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಯನ್ನಾಗಿ ಘೋಷಣೆ ಮಾಡಿ ಮತ್ತು ಅಭಿವೃದ್ಧಿ ಹರಿಕಾರ ಬಸವರಾಜ ರಾಯರೆಡ್ಡಿ ಅವರನ್ನು ಕ್ಯಾಬಿನೇಟ್ ದರ್ಜೆ ಮಂತ್ರಿಯನ್ನಾಗಿ ಮಾಡಿ ಎಂದು ಬ್ಲಾಕ್ ಕಾಂಗ್ರೆಸ್ಸ್ ಕುಕನೂರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮಹೇಶ್ ಗಾವರಾಳ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿಕೊಂಡರು.
ಕುಕನೂರು ತಾಲೂಕು ಗಾವರಾಳ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಭಾಗ್ಯಗಳ ಸರದಾರ, ಅಹಿಂದ ನಾಯಕ ಶ್ರಿ ಸಿದ್ದರಾಮ್ಯನವರನ್ನು ಹೈ ಕಮಾಂಡ್ ಕೂಡಲೇ ಮುಖ್ಯಮಂತ್ರಿ ಎಂದು ಘೋಷಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಬರುವಲ್ಲಿ ಸಿದ್ದರಾಮಯ್ಯನವರ ಕೊಡುಗೆ ಅಪಾರವಾದದ್ದು 2013 ರಿಂದ 2018 ರ ವರೆಗೆ 5 ವರ್ಷಗಳ ಕಾಲ ಸುದೀರ್ಘ ರಾಜವನ್ನಾಳಿದ ಅವರು ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡಿದ್ದಾರೆ, ಒಂದು ಸಮುದಾಯದ ನಾಯಕರಾಗದೆ ಪ್ರತಿಯೊಂದು ಸಮುದಾಯಗಳ ನಾಯಕರನ್ನು ನಾಯಕರಾಗಿ ಮಾಡಿದ ಕೀರ್ತಿ ಇವರದು.
ಕರ್ನಾಟಕದ ಬೀದರ್ ನಿಂದ ಚಾಮರಾಜನಗರ ತನಕವು ತಮ್ಮದೇ ಆದ ಹಿಡತವನ್ನು ಇಟ್ಟುಕೊಂಡ ಮಾಸ್ ಲೀಡರ್ ಆಗಿದ್ದಾರೆ, ತಮ್ಮ ಕಾಲಾವಧಿಯಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ, ವಸತಿ ಭಾಗ್ಯ, ಆರೋಗ್ಯ ಭಾಗ್ಯದಂತಹ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಬಡವರ ,ಶ್ರಮಿಕರ ಮತ್ತು ದೀನದಲಿತರ ಪರವಾಗಿ ಸರಕಾರ ನಡೆಸಿದ್ದಾರೆ ಈ ಬಾರಿ ನಡೆಸಿದ ನಿಮ್ಮ ನೆಚ್ಚಿನ ಮುಖ್ಯಮಂತ್ರಿ ಯಾರು ಎಂಬ ಸರ್ವೆಗಳಲ್ಲಿ ಸಿದ್ದರಾಮಯ್ಯನವರೇ ಮುಂಚಣೆಯಲ್ಲಿದ್ದು ರಾಜ್ಯದ ಪ್ರಜೆಗಳ ನೆಚ್ಚಿನ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಘೋಷಣೆ ಮಾಡಿ ಆದೇಶ ಹೊರಡಿಸಬೇಕು ಮತ್ತು ಕೊಪ್ಪಳ ಜಿಲ್ಲಾ ಅಭಿವೃದ್ಧಿ ದೃಷ್ಟಿಯಿಂದ ಅಭಿವೃದ್ಧಿ ಹರಿಕಾರ, ಅಭಿವೃದ್ಧಿ ಒಂದೇ ನನ್ನ ಮಾನದಂಡ ಯಲಬುರ್ಗಾ ಕ್ಷೇತ್ರದ ಸರ್ವಾಂಗನ ಅಭಿವೃದ್ಧಿ ಎನ್ನುತ್ತಿರುವ ಯಲಬುರ್ಗಾ ವಿಧಾನಸಭಾ ಶಾಸಕರಾದ ಶ್ರೀಯುತ ಬಸವರಾಜ ರಾಯರೆಡ್ಡಿ ಅವರನ್ನು ರಾಜ್ಯದ ಕ್ಯಾಬಿನೇಟ್ ದರ್ಜೆ ಮಂತ್ರಿಯನ್ನಾಗಿ ಮಾಡಬೇಕೆಂದು ಈ ಮೂಲಕ ಹೈಕಮಾಂಡ್ ಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ನಿಂಗರಾಜ ದೊಡ್ಡಮನಿ
ಠೀಕೆಗಳು 0