ಆನೇಕಲ್ ದೊಡ್ಡಯ್ಯನವರ ಅಭಿವೃದ್ಧಿಯ ಚಿಂತನೆಗಳನ್ನು ಹಾಗೂ ಆಪ್ ಆಡಳಿತ ಮೆಚ್ಚಿ ಆಪ್ ಮುಖಂಡ ಶರಣಪ್ಪ ದೊಣೆಗುಡ್ಡ ನೇತೃತ್ವದಲ್ಲಿ ಹತ್ತಾರು ಯುವಕರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು
ಆನೇಕಲ್ ದೊಡ್ಡಯ್ಯನವರ ಅಭಿವೃದ್ಧಿಯ ಚಿಂತನೆಗಳನ್ನು ಹಾಗೂ ಆಪ್ ಆಡಳಿತ ಮೆಚ್ಚಿ ಆಪ್ ಮುಖಂಡ ಶರಣಪ್ಪ ದೊಣೆಗುಡ್ಡ ನೇತೃತ್ವದಲ್ಲಿ ಹತ್ತಾರು ಯುವಕರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು
ಗಜೇಂದ್ರಗಡ : ಆನೇಕಲ್ ದೊಡ್ಡಯ್ಯನವರ ಅಭಿವೃದ್ಧಿಯ ಚಿಂತನೆಗಳನ್ನು ಹಾಗೂ ಆಪ್ ಆಡಳಿತ ಮೆಚ್ಚಿ ಆಪ್ ಮುಖಂಡ ಶರಣಪ್ಪ ದೊಣೆಗುಡ್ಡ ನೇತೃತ್ವದಲ್ಲಿ ಹತ್ತಾರು ಯುವಕರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು.
ಬಳಿಕ ಶರಣಪ್ಪ ದೊಣ್ಣೆಗುಡ್ಡ ಮಾತನಾಡಿ ಅರವಿಂದ ಕ್ರೇಜಿವಾಲ್, ಹಾಗೂ ಪಂಜಾಬದಲ್ಲಿ ಆಡಳಿತದ ಬಗ್ಗೆ ಜನರು ಅರಿತು ಕೊಳ್ಳಬೇಕಾಗಿದೆ.ಆಪ್ ಪಕ್ಷದ ಪ್ರನಾಳಿಕೆಯನ್ನು ಗಮನಿಸಿದ್ದಾಗ ಎಲ್ಲಾ ರಂಗಕ್ಕೂ ಮಹತ್ವ ನೀಡುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದ ಅಡಿಯಲ್ಲಿದೆ.ಈ ಬಾರಿ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆನೇಕಲ್ ದೊಡ್ಡಯ್ಯನವರು ವಿಶಿಷ್ಟವಾದ ಚಿಂತನೆಯಿಟ್ಟುಕೊಂಡು ಬಂದಿದ್ದಾರೆ.ಅವರನ್ನು ಬಹುಮತದಿಂದ ಗೆಲ್ಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಯುವಕರಾದಮೌನಪ್ಪ ಮಳೋತ್ತರ,ನಾಗೇಶ ಮಾಳೋತ್ತರ,ಮಂಜನಾಥ ಮಾಳೋತ್ತರ, ಯಮನೂರ ರಾಠೋಡ್,ಯಮನೂರಸಾಬ ನದಾಫ, ಶಿವಪ್ಪ ರಾಠೋಡ ಸೇರ್ಪಡೆಯಾದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಕಳಕನಗೌಡ ಗೌಡರ, ಅನೀಲ ಕರ್ಣೆ ಸೇರಿದಂತೆ ಅನೇಕರು ಇದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0