ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಸ್ಕಾಲರ್ಶಿಪ್, ಫೆಲೋಶಿಪ್ ಗಳನ್ನು ಈವರೆಗೆ ಸರಿಯಾಗಿ ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪ್ರೋತ್ಸಾಹಧನ ಕೂಡಾ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗಲಿಲ್ಲ.
ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶೂಜ್, ಸೈಕಲ್, ಲ್ಯಾಪ್ಟಾಪ್ ಯಾವುದನ್ನು ಸರಿಯಾಗಿ ಕೊಟ್ಟಿಲ್ಲಾ. ಹಾಸ್ಟೆಲ್ ವಿದ್ಯಾರ್ಥಿ ಬದುಕು ಇನ್ನೂ ಕಷ್ಟಕರ ಆಗಿದೆ.
ಗಜೇಂದ್ರಗಡ : ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು ಭರದ ಪ್ರಚಾರಗಳು ಎಲ್ಲೆಡೆಯೂ ನಡೆಯುತ್ತಿದೆ.
ಶೈಕ್ಷಣಿಕ ವಾತಾವರಣದಲ್ಲಿ ಕೊಂಚಾದರೂ ಇದ್ದ ಕ್ಯಾಂಪಸ್ ಡೆಮಾಕ್ರಸಿಯನ್ನು ನಾಶ ಮಾಡಿ. ಸೌಹಾರ್ದ ಶೈಕ್ಷಣಿಕ ಸಂಸ್ಥೆಗಳ ಮಧ್ಯ ಹಿಜಾಬ್ ನೆಪದಲ್ಲಿ ಕೇಸರಿ ಶಾಲು ಹಂಚಿ ಸೌಹಾರ್ದ ಶೈಕ್ಷಣಿಕ ವಾತಾವರಣ ಹದಗೆಡಿಸಲಾಯಿತು. ಪಠ್ಯ ಪುಸ್ತಕಗಳ ಬದಲಾವಣೆಯ ನೆಪದಲ್ಲಿ ನಾಡ ಮಕ್ಕಳನ್ನು, ನೆಲದ ಹೋರಾಟಗಾರರನ್ನು ತಗೆದೆಸೆದು ಅವರ ಜಾಗದಲ್ಲಿ ಕೋಮುವಾದಿಗಳನ್ನು ಪಠ್ಯದ ಭಾಗವಾಗಿಸಲಾಯಿತು.
ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಸ್ಕಾಲರ್ಶಿಪ್, ಫೆಲೋಶಿಪ್ ಗಳನ್ನು ಈವರೆಗೆ ಸರಿಯಾಗಿ ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪ್ರೋತ್ಸಾಹಧನ ಕೂಡಾ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗಲಿಲ್ಲ. ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶೂಜ್, ಸೈಕಲ್, ಲ್ಯಾಪ್ಟಾಪ್ ಯಾವುದನ್ನು ಸರಿಯಾಗಿ ಕೊಟ್ಟಿಲ್ಲಾ. ಹಾಸ್ಟೆಲ್ ವಿದ್ಯಾರ್ಥಿ ಬದುಕು ಇನ್ನೂ ಕಷ್ಟಕರ ಆಗಿದೆ ಎಂದು ಗಜೇಂದ್ರಗಡ ತಲೂಕಾ ಮುಖಂಡ ಚಂದ್ರು ರಾಠೋಡ ಕಿಡಿ ಕಾರಿದರು
ಕೊಠಾರಿ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ 30% ಹಣವನ್ನು ತನ್ನ ಬಜೆಟ್ ನಲ್ಲಿ ಮೀಸಲಿಡಬೇಕೆಂದು ಹೇಳಿದೆ ಆದರೆ ಈವರೆಗೆ ಅದನ್ನು ಜಾರಿ ಮಾಡಲು ಆಗುತ್ತಿಲ್ಲ ಅದರ ಅರ್ಧದಷ್ಟನ್ನು ಕೂಡಾ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹಣ ಮಿಸಲಿಡುತ್ತಿಲ್ಲಾ ಕಳೆದ ಬಜೆಟ್ ನಲ್ಲಿ 12% ಮಾತ್ರವೇ ಶಿಕ್ಷಣಕ್ಕೆ ನೀಡಿದ್ದು.
ಯುವಜನರು ಉದ್ಯೋಗ ಇಲ್ಲದೆ ಊರರು ಅಲೆದಾಡುವ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಇಲ್ಲ, ಹಿಂದೆ ಹೇರಿಕೆಯಿಂದ ಮಾತೃಭಾಷೆ ನಾಶ ಮಾಡಲಾಗುತ್ತಿದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸ್ಥಳೀಯ ಮಾತೃಭಾಷೆಯಲ್ಲಿ ಅವಕಾಶ ನೀಡದೆ ಎಲ್ಲವನ್ನೂ ಹಿಂದಿ, ಇಂಗ್ಲೀಷ್ ನಲ್ಲಿ ಅವಕಾಶ ನೀಡಿ ಸ್ಥಳೀಯರಿಗೆ ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ.
ಇನ್ನೂ ಮಹಿಳೆಯರು ಮೇಲೆ ನಿರಂತರ ದೌರ್ಜನ್ಯ, ಹಿಂಸೆ, ಅತ್ಯಾಚಾರ, ಅನಾಚಾರ ನಡೆಯುತ್ತಿದ್ದರು ಅದರಲ್ಲೂ ವಿದ್ಯಾರ್ಥಿನಿಯರು ಮೇಲೆ ಅತಿ ಹೆಚ್ಚು ದೌರ್ಜನ್ಯ ಅತ್ಯಾಚಾರ ನಡೆಯುತ್ತಿದ್ದರು ಅದನ್ನು ತಡೆಯದೆ ಆಳುವ ಪಕ್ಷದವರೇ ಸಿಡಿ ಕೇಸ್ ಗಳಲ್ಲಿ ಪಿಟ್ಟ ಆಗಿರುವುದು ಕಾಲದ ದುರಂತವೇ ಸರಿ. ಉತ್ತರ ಕನ್ನಡಕ್ಕೆ ಒಂದು ಮಲ್ಟಿ ಸ್ಪೆಷಲಿಸ್ಟ ಆಸ್ಪತ್ರೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಆಗಬೇಕೆಂಬ ಹಲವಾರು ವರ್ಷಗಳ ಬೇಡಿಕೆ ಈಗಲೂ ಮರಿಚಿಕೆಯಾಗಿದೆ. ಜಾತ್ಯಾತೀತತೆ ನೆಲೆಗಳನ್ನು ನಾಶ ಮಾಡಿ, ಸಂವಿಧಾನವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಇಂದು ಪ್ರಬುತ್ವ ನಡೆದುಕೊಳ್ಳುತ್ತಿದ್ದು ಇದರ ವಿರುದ್ಧವೇ ವಿದ್ಯಾರ್ಥಿ ಯುವಜನರ ಮತ ಚಲಾಸಬೇಕಂದು ಮನವಿ ಮಾಡುತ್ತವೆ.
ಈ ಭಾರಿ ರಾಷ್ಟ್ರೀಯ ಪಕ್ಷಗಳ ನಾಯಕರುಗಳ ಕರ್ನಾಟಕವನ್ನು ಒಂದು ಪ್ರಯೋಗ ಶಾಲೆ ಎಂಬಯಂತೆ ಉಪಯೋಗಿಸುತ್ತಿದ್ದಾರೆ ಯಾಕೆಂದರೆ ಮುಂದೆ ನಡೆಯಲಿರುವ 2024 ರ ಲೋಕಸಭಾ ಚುನಾವಣೆಯ ಮೇಲೆ ಇದು ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟ. ಈ ನಡುವೆ ದೇಶದ ಪ್ರಧಾನಿ ಒಬ್ಬರು ಇಷ್ಟೊಂದು ದಂಡಯಾತ್ರೆಯನ್ನು ನಡೆಸಿ ದೇಶದ ಸ್ವಾಯತ್ತ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವ ಕೆಲಸವನ್ನು ಈ ಹಿಂದೆ ಯಾರು ಮಾಡಿರಲಿಲ್ಲ.
ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲೆ ಬಿಡು ಬಿಟ್ಟರುವ ಪ್ರಧಾನಿ ಲಿಂಗಾಯತ ಸ್ವಾಮೀಜಿಗಳಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಮಹಾಸ್ವಾಮಿ ನಿಧನಾರಾದಾಗಲೂ ಬರಲಿಲ್ಲ. ನಾಡಿಗೆ ಬರ ಬಂದಾಗಲೂ ಮೋದಿ ಸಾಹೇಬರು ತುಂಬಾ ಸೂಕಿವಾಲಾ ಆಗಿ ಪ್ರವಾಸದಲ್ಲಿದ್ದರು, ಪ್ರವಾಹ ಬಂದು ಜನ ತತ್ತರಿಸಿದಾಗಲೂ ಬರಲಿಲ್ಲ. ಕೋವಿಡ್ ಬಂದು ಜನ ಆಕ್ಸಿಜನ್ ಇಲ್ಲದಿದ್ದಾಗಲೂ ಮೋದಿ ಮೌನಿಯಾಗಿದ್ದರು, ರಸ್ತೆಯಲ್ಲಿ ನಡೆದು ಬಂದು ಮನೆ ಸೇರದೆ ಜನ ಹಾದಿ ಹೆಣವಾದಾಗಲೂ ಮೋದಿ ತುಂಬಾ ಕೆಲಸದ ಒತ್ತಡದಲ್ಲಿ ನವಿಲಿಗೆ ಕಾಳು ತಿನಿಸುತ್ತಿದ್ದ ಮಾನ್ಯ ಪ್ರಧಾನ ಮಂತ್ರಿಗಳು
ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ಪಟ್ಟಿ ಬೆಳೆಯುತ್ತದೆ.
ರಾಜ್ಯಕ್ಕೆ ಸಿಗಬೇಕಾದ ಜಿಎಸ್ ಟಿ ಪಾಲು ಕೊಡಲಿಲ್ಲ, ರಾಜ್ಯಕ್ಕೆ ನೀಡಬೇಕಾದ ಬರ ಪರಿಹಾರ ಇಲ್ಲಾ, ದಲಿತ, ಅಲ್ಪಸಂಖ್ಯಾತರ ಸಿಗಬೇಕಾದ ಅನುದಾನದಲ್ಲಿ ಕಡಿತ, ಶಿಕ್ಷಣಕ್ಕೆ ನೀಡಬೇಕಾದ ಹಣ ನೀಡದೆ ವಿದ್ಯಾರ್ಥಿ ವಿರೋಧಿ, ಶೈಕ್ಷಣಿಕ ವಾತಾವರಣ ಹಾಳು ಮಾಡುವ ಹೊಸ ಶಿಕ್ಷಣ ನೀತಿ-2020 ನ್ನು ಅಸಂವಿಧಾನಾತ್ಮಕವಾಗಿ ಜಾರಿ ಮಾಡಿ ಶಿಕ್ಷಣ ವ್ಯವಸ್ಥೆಯನ್ನು ಮನುವಾದೀಕರಣ, ಖಾಸಗೀಕರಣ ಮಾಡುವ ವಿದೇಶಿ ವ್ಯಾಪಾರಕ್ಕೆ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ದೇಶವನ್ನೇ ಒತ್ತೆ ಇಡುವ ನೀತಿಯನ್ನು ಜಾರಿ ಮಾಡಲಾಗುತ್ತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೇಕಾದದ್ದನ್ನು ಕೊಳ್ಳುವ ಶಕ್ತಿಯಿಲ್ಲದೆ ವ್ಯವಾಟಿನಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಗಗನ ಕುಸುಮಗೊಂಡಿದೆ.
ಏನೆಲ್ಲಾ ದೇಶದ ಜನ ಕಷ್ಟ ಅನುಭವಿಸುತ್ತಿದ್ದರು ಅವರ ಬಗ್ಗೆ ಕಾಳಜಿ ವಹಿಸದ ಸರ್ಕಾರ ತನಗೆ ತಿಳಿದ ಹಾಗೆ ಶ್ರೀಮಂತರ ಜೇಬು ತುಂಬುವ ಕೆಲಸ ಮಾಡುತ್ತಿದೆ. ಇನ್ನೂ ಜನ ತಮ್ಮ ಕಷ್ಟ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರೆ? ಬೀದಿಗಿಳಿದರೆ ಕಷ್ಟ ಎಂದು ಜನರ ಗಮನ ಬೇರೆಡೆಗೆ ಸೆಳೆದು ಅವರಿಗೆ ಜಾತಿ ಧರ್ಮದ ಹೆಸರಲ್ಲಿ, ಭಾವನಾತ್ಮಕ ವಿಷಯಗಳಲ್ಲಿ ಜಗಳ ಹಚ್ಚಿ ಮಜಾ ನೋಡುವ ಕಾರ್ಯ ಮಾಡುತ್ತಿದ್ದಾರೆ.
ಇದೆಲ್ಲಾ ಕಂಡು ನಾವು ಕುರುಡರಾಗಿದ್ದು ಸಾಕು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ವಾತಾವರಣಕ್ಕಾಗಿ ಬಿಜೆಪಿಯೆಂಬ ದೈತ್ಯ ಬೂತ್ ವನ್ನು ಕಿತ್ತು ಎಸೆದು ಜಾತ್ಯಾತೀತತೆ ಎತ್ತಿ ಹಿಡಿಯುವ, ಸಂವಿಧಾನವನ್ನು ರಕ್ಷಿಸುವ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುವ ಪಕ್ಷಗಳಿಗೆ ವಿದ್ಯಾರ್ಥಿ- ಯುವಜನರು ಮತ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಗಜೇಂದ್ರಗಡ ತಾಲೂಕ ಸಮಿತಿಯು ವಿದ್ಯಾರ್ಥಿ- ಯುವಜನರಲ್ಲಿ ಮನವಿ ಮಾಡುತ್ತದೆ.
ಠೀಕೆಗಳು 0