ಕಳೆದ ಐದು ವರ್ಷಗಳ ಕಾಲ ದುರಾಡಳಿತ ಭ್ರಷ್ಟಾಚಾರ ಬೆಲೆ ಏರಿಕೆ ಕೋಮ ಸಂಘರ್ಷ ಸುಳ್ಳಿನ ರಾಜಕಾರಣಗಳಿಂದಾಗಿ ಕುಂಠಿತವಾಗಿದ್ದ ರಾಜ್ಯದ ಅಭಿವೃದ್ಧಿಯು ಮತದಾರ ಪ್ರಭುಗಳು ನೀಡಿದ ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಯಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭಗೊಂಡಿದೆ
ಕಳೆದ ಐದು ವರ್ಷಗಳ ಕಾಲ ದುರಾಡಳಿತ ಭ್ರಷ್ಟಾಚಾರ ಬೆಲೆ ಏರಿಕೆ ಕೋಮ ಸಂಘರ್ಷ ಸುಳ್ಳಿನ ರಾಜಕಾರಣಗಳಿಂದಾಗಿ ಕುಂಠಿತವಾಗಿದ್ದ ರಾಜ್ಯದ ಅಭಿವೃದ್ಧಿಯು ಮತದಾರ ಪ್ರಭುಗಳು ನೀಡಿದ ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಯಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭಗೊಂಡಿದೆ
ಕುಕನೂರು :
ಕಳೆದ ಐದು ವರ್ಷಗಳ ಕಾಲ ದುರಾಡಳಿತ ಭ್ರಷ್ಟಾಚಾರ ಬೆಲೆ ಏರಿಕೆ ಕೋಮ ಸಂಘರ್ಷ ಸುಳ್ಳಿನ ರಾಜಕಾರಣಗಳಿಂದಾಗಿ ಕುಂಠಿತವಾಗಿದ್ದ ರಾಜ್ಯದ ಅಭಿವೃದ್ಧಿಯು ಮತದಾರ ಪ್ರಭುಗಳು ನೀಡಿದ ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಯಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭಗೊಳ್ಳುವ ಮೂಲಕ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತೇವೆ ಎಂದು ಯಲಬುರ್ಗಾ ನೂತನ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಪಟ್ಟಣದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತದಾರ ಬಾಂಧವರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಪಟ್ಟಣದ ಡಾ//ಬಿ,ಆರ್, ಅಂಬೇಡ್ಕರ್ ವೃತ್ತದಿಂದ ಮಹಾಮಾಯ ದೇವಿ ತೇರಿನ ಗಡ್ಡಿ ಚೌಡಿಯ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ಕೋಮು ಸಂಘರ್ಷಗಳ ನಡುವೆ ರಾಜ್ಯದ ಅಭಿವೃದ್ಧಿ ಕಮರಿ ಹೋಗಿತ್ತು 2023 ಮೇ 13ರಂದು ರಾಜ್ಯದ ಜನತೆಯು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು ಇವತ್ತಿನಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೊಸ ಪರ್ವ ಆರಂಭವಾಗಿದ್ದು ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಕ್ಷೇತ್ರ ಜನತೆಯು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿಗೆ ಮತನೀಡಿ ನನ್ನನ್ನು 17 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದಾರೆ ಅವರಿಗೆ ನನ್ನ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ರಾಜ್ಯದ ಚುನಾವಣೆಯೇ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು, ನರೇಂದ್ರ ಮೋದಿ ನೇತೃತ್ವ ಸರ್ಕಾರ ಯಾವ ಒಂದು ಜನಪರ ಯೋಜನೆಗಳನ್ನು ಕೊಡದೆ ಬರೆ ಸುಳ್ಳು ,ಹೋಮಮಾರ್ಗದ ಮೂಲಕ ಅಧಿಕಾರವನ್ನು 9 ವರ್ಷಗಳಿಂದ ನಡೆಸುತ್ತಿದ್ದಾರೆ, ಬೆಲೆ ಏರಿಕೆ, ಕೋಮುಗಲಭೆ, ಮತ್ತು ನಿರುದ್ಯೋಗ,ಸುಳ್ಳು ಸುದ್ದಿಗಳೇ ನರೇಂದ್ರ ಮೋದಿ ಸರ್ಕಾರದ ನೀಡಿರುವ ಅಚ್ಚೇದಿನ್, ದೇಶ ಜನರು ದೇಶದ ಅಭಿವೃದ್ಧಿಗಾಗಿ ಮತ ಹಾಕುತ್ತಾರೆ ಎಂದು ಕರ್ನಾಟಕದ ಮತದಾರರು ನಿರೂಪಿಸಿದ್ದಾರೆ ಎಂದರು.
ನಾವು ಚುನಾವಣೆ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ಜಾರಿಗೆ ತಂದಿದ್ದೇವೆ. ಮಂತ್ರಿಗಿರಿ ನನ್ನ ಧ್ಯೇಯವಲ್ಲ ಕ್ಷೇತ್ರದ ಜನರ ಸೇವೆ ನನ್ನ ಮೂಲ ಧ್ಯೇಯ. ತಾಲೂಕಿನಲ್ಲಿ ಒಟ್ಟು 40 ಹೊಸ ಕೆರೆಗಳನ್ನು ನಿರ್ಮಾಣ ಮಾಡಲಿದ್ದೇನೆ, ಕುಕನೂರು ಪಟ್ಟಣಕ್ಕೆ ನೂರು ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ, ನೂರು ಹಾಸಿಗೆಯ ಆಸ್ಪತ್ರೆ, ಕುಕನೂರು ಪಟ್ಟಣಕ್ಕೆ ಹೆಚ್ಚಿನ ಅಂಬುಲೆನ್ಸ್ ಗಳ ಸೌಲಭ್ಯ, ಕುಕನೂರು ಪಟ್ಟಣದ ಬಡ ಜನರಿಗೆ ಒಂದು ಸಾವಿರ ಮನೆ ನಿರ್ಮಾಣ, ಮಧ್ಯಮ ವರ್ಗದ ಜನರಿಗೆ ಹೌಸಿಂಗ್ ಬೋರ್ಡ್ ನಿರ್ಮಾಣ, 25 ಎಕರೆಯಲ್ಲಿ ತಾಲೂಕು ಆಡಳಿತ ಭವನ, ಉನ್ನತ ಮಟ್ಟದ ಕ್ರೀಡಾಂಗಣ, ಒಳ ಚರಂಡಿ ವ್ಯವಸ್ಥೆ (ಯು ಜಿ ಡಿ), ಕುಕನೂರ್ ಯಲಬುರ್ಗಾ ಮತ್ತು ತಳಕಲ್ ಪಟ್ಟಣಗಳಿಗೆ ತುಂಗಭದ್ರ ನದಿಯಿಂದ ಕುಡಿಯುವ ನೀರು ಸೌಕರ್ಯ, ಏನು ಆರು ತಿಂಗಳಲ್ಲಿ ಹುಬ್ಬಳಿಯಿಂದ ಕುಷ್ಟಗಿ ವರೆಗೆ ರೈಲು ಆರಂಭಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ಕಾಸಿಂ ಸಾಬ್ ತಳಕಲ್ ,ನೂರದ್ದೀನ್ ಸಾಬ್ ಗುಡಿಯಿಂದಲ್, ಸತ್ಯನಾರಾಯಣ ಹರಪನಹಳ್ಳಿ, ಶಿವನಗೌಡ ದಾನರೆಡ್ಡಿ, ರಾಮಣ್ಣ ಭಜಂತ್ರಿ, ಜಂಬಣ್ಣ ಅಂಗಡಿ, ಇನ್ನಿತರ ಮುಖಂಡರು ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0