ಮಸಬ ಹಂಚಿನಾಳ ನಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಸೋಮವಾರ ಬೆಳಿಗ್ಗೆ ಕುಕನೂರ ತಾಲೂಕಿನ ವಿವಿಧ ಗ್ರಾಮಗಳ ಸಂಘದ ಪದಾಧಿಕಾರಿಗಳು, ಹಸಿರು ಸೇನೆ ರೈತ ಸಂಘದ ಸದಸ್ಯರು ಬಸವರಾಜ್ ಕೊಡ್ಲಿ ನೇತೃತ್ವದಲ್ಲಿ ಆಗಮಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ
ಮಸಬ ಹಂಚಿನಾಳ ನಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಸೋಮವಾರ ಬೆಳಿಗ್ಗೆ ಕುಕನೂರ ತಾಲೂಕಿನ ವಿವಿಧ ಗ್ರಾಮಗಳ ಸಂಘದ ಪದಾಧಿಕಾರಿಗಳು, ಹಸಿರು ಸೇನೆ ರೈತ ಸಂಘದ ಸದಸ್ಯರು ಬಸವರಾಜ್ ಕೊಡ್ಲಿ ನೇತೃತ್ವದಲ್ಲಿ ಆಗಮಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ
ಕುಕನೂರು :
2023ರ ಸಾರ್ವತ್ರಿಕ ಚುನಾವಣೆ ಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಿ ಆರ್ ನಾರಾಯಣ ರೆಡ್ಡಿ ಬಣದ ತಾಲೂಕ ರೈತ ಸಂಘದಿಂದ ಬೆಂಬಲ ಸೂಚಿಸಲಾಯಿತು.
ಮಸಬ ಹಂಚಿನಾಳ ನಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಸೋಮವಾರ ಬೆಳಿಗ್ಗೆ ಕುಕನೂರ ತಾಲೂಕಿನ ವಿವಿಧ ಗ್ರಾಮಗಳ ಸಂಘದ ಪದಾಧಿಕಾರಿಗಳು, ಹಸಿರು ಸೇನೆ ರೈತ ಸಂಘದ ಸದಸ್ಯರು ಬಸವರಾಜ್ ಕೊಡ್ಲಿ ನೇತೃತ್ವದಲ್ಲಿ ಆಗಮಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ್ ಕೊಡ್ಲಿ.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಿ ಆರ್ ನಾರಾಯಣ ರೆಡ್ಡಿ ಬಣದ ತಾಲೂಕಿನ ಎಲ್ಲಾ ಗ್ರಾಮ ಘಟಕದ ಸದಸ್ಯರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ. ಸದ್ಯ ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಪ್ಪ ಆಚಾರ್ ಅವರು ಈ ಹಿಂದೆ ಶಾಸಕರಿದ್ದಾಗ ರೈತರ ಹೊಲಗಳಿಗೆ ಹೋಗಲು ಸುಸಜ್ಜಿತವಾದ ರಸ್ತೆಗಳು,ಗಂಗಾ ಕಲ್ಯಾಣಿ, ಸಾಲ ಸೌಲಭ್ಯಗಳಂತ ಸಾಕಷ್ಟು ಅನುಕೂಲಗಳನ್ನು ಮಾಡಿದ್ದಾರೆ. ಮುಂದೆಯೂ ಸಹ ರೈತ ಸಂಘದೊಂದಿಗೆ ಇದ್ದು, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತರುವ ಭರವಸೆಯನ್ನು ನೀಡಿದ್ದರಿಂದ ಹಾಲಪ್ಪ ಆಚಾರ್ ಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಮಾತನಾಡಿ ನಾನೊಬ್ಬ ರೈತನ ಮಗನಾಗಿದ್ದು ರೈತರ ಕಷ್ಟಕಾರ್ಪಣ್ಯಗಳನ್ನು ತಿಳಿದವನಾಗಿದ್ದೇನೆ ರೈತರ ಪರವಾಗಿ ನಮ್ಮ ಪಕ್ಷ ಯಾವಾಗಲೂ ಇದ್ದೇ ಇರುತ್ತದೆ ರೈತರು ಈ ದೇಶದ ಬೆನ್ನೆಲುಬು ನನ್ನ ಈ ಇಂದಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಮತ್ತೊಮ್ಮೆ ನನಗೆ ಬೆಂಬಲ ನೀಡಲು ಮುಂದೆ ಬಂದಿರುವ ರೈತ ಸಂಘದ ಸರ್ವ ಸದಸ್ಯರಿಗೆ ಚಿರಋಣಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಹುರುಳಿ, ತಾಲೂಕ ಅಧ್ಯಕ್ಷ ಮಂಜುನಾಥ ಚೆಟ್ಟಿ, ಗುಳನಗೌಡ, ಹುಚ್ಚಿರಪ್ಪ ಕೌದಿ, ಲಕ್ಷ್ಮಣ ಕೋರಿ, ಬಸಪ್ಪ ಮಂಡಲಗೇರಿ, ಮಲ್ಲಿಕಾರ್ಜುನ ಪಾಟೀಲ, ರೇಣಮ್ಮ ಬಿನ್ನಾಳ, ಸಾವಿತ್ರಮ್ಮ ತೆಗ್ಗಿನಮನಿ, ರಾಜು ಮಡಿವಾಳರ, ಶರಣಪ್ಪ ಎಮ್ಮಿ , ಅನಿಲ್ ಹುಜರತ್ತಿ ಹಾಗೂ ಇತರರಿದ್ದರು.
ವರದಿಗಾರ - ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0