ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದ್ದು ಇತಿಹಾಸ. ಕಾಂಗ್ರೆಸ್ ಹಾಗು ಜೆಡಿಎಸ್ನ 17 ಜನ ಶಾಸಕರನ್ನು ಆಪರೇಷನ್ ಕಮಲ ಮಾಡುವ ಮೂಲಕ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಸರ್ಕಾರವನ್ನು ಬೀಳಿಸಲಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದ್ದು ಇತಿಹಾಸ. ಕಾಂಗ್ರೆಸ್ ಹಾಗು ಜೆಡಿಎಸ್ನ 17 ಜನ ಶಾಸಕರನ್ನು ಆಪರೇಷನ್ ಕಮಲ ಮಾಡುವ ಮೂಲಕ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಸರ್ಕಾರವನ್ನು ಬೀಳಿಸಲಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದ್ದು ಇತಿಹಾಸ. ಕಾಂಗ್ರೆಸ್ ಹಾಗು ಜೆಡಿಎಸ್ನ 17 ಜನ ಶಾಸಕರನ್ನು ಆಪರೇಷನ್ ಕಮಲ ಮಾಡುವ ಮೂಲಕ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಸರ್ಕಾರವನ್ನು ಬೀಳಿಸಲಾಗಿತ್ತು. ಆ ಬಳಿಕ ಭಾರತೀಯ ಜನತಾ ಪಾರ್ಟಿ ಮೂರೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತವನ್ನೂ ಮಾಡಿತ್ತು. ಅಂದು ಎಲ್ಲವನ್ನೂ ಮೌನವಾಗಿ ನೋಡುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ರಾಜ್ಯದಲ್ಲಿ ಭರ್ಜರಿ ಬಹುಮತ ಸಾಧಿಸುವುದಕ್ಕೆ ಪರೋಕ್ಷವಾಗಿ ಆಪರೇಷನ್ ಕಮಲವೂ ಒಂದು ಕಾರಣ ಎಂದರೆ ಸುಳ್ಳೇನು ಅಲ್ಲ. ಇದಿಗ ಮಹಾರಾಷ್ಟ್ರದಲ್ಲೂ ಭಾರತೀಯ ಜನತಾ ಪಾರ್ಟಿ ಅದೇ ಫಾರ್ಮುಲ ಬಳಸಿಕೊಂಡಿದೆ. ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿರುವ ಕಾಂಗ್ರೆಸ್ ಹಾಗು ಎನ್ಸಿಪಿ ಮತ್ತು ಶಿವ ಸೇನೆ ಅಧಿಕಾರ ಕಿತ್ತುಕೊಳ್ಳುವ ಸೂತ್ರ ಹೆಣೆಯುತ್ತಿವೆ.
ಶಿವಸೇನೆ ಬಳಿಕ ಎನ್ಸಿಪಿ ಛಿದ್ರ ಮಾಡಿದ ಬಿಜೆಪಿ..!
ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯ ದಾಖಲಿಸಿ ಅಧಿಕಾರ ಬರುವುದು ಮರಿಚಿಕೆ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಆಪರೇಷನ್ ಕಮಲದ ಮೊರೆ ಹೋಗುವ ಬಿಜೆಪಿ ನಾಯಕರು, ಅಧಿಕಾರಕ್ಕಾಗಿ ಎಂಥಹ ಸವಾಲನ್ನು ಬೇಕಿದ್ದರೂ ಎದುರಿಸುತ್ತೇವೆ ಎನ್ನುವ ಹಠಕ್ಕೆ ಬೀಳುತ್ತಾರೆ. ಈ ಹಿಂದೆ ಮಹಾಘಟಬಂಧನ್ ಸರ್ಕಾರ ರಚನೆ ಆಗಿತ್ತು. ಕಾಂಗ್ರೆಸ್, ಎನ್ಸಿಪಿ ಬೆಂಬಲದಿಂದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆಗಿದ್ದರು. ಆದರೆ ಭಾರತೀಯ ಜನತಾ ಪಾರ್ಟಿ ಶಿವಸೇನೆಯನ್ನು ಇಬ್ಭಾಗ ಮಾಡಿತ್ತು. ಏಕನಾಥ್ ಸಿಂಧೆ ನೇತೃತ್ವದಲ್ಲಿ ಶಿವಸೇನೆಯ ಬಹುತೇಕ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರವನ್ನು ರಚನೆ ಮಾಡಿತ್ತು. ಸರ್ಕಾರ ರಚನೆ ಆದ ಬಳಿಕ ಬೇರೆ ಪಕ್ಷವನ್ನು ಸೆಳೆಯುವ ಅವಶ್ಯತೆ ಇರಲಿಲ್ಲ. ಆದರೂ ಎನ್ಸಿಪಿಯನ್ನು ಛಿದ್ರ ಮಾಡಿದೆ. ಅಜಿತ್ ಪವಾರ್, ಪ್ರಫುಲ್ ಪಟೇಲ್ ನೇತೃತ್ವದಲ್ಲಿ 9 ಜನರು ಶಿವಸೇನೆ, ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಶರದ್ ಪವಾರ್ ಬೆಂಬಲಕ್ಕೆ ಪೆಟ್ಟು..!
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಜೊತೆಗೂಡಿ ವಿರೋಧ ಪಕ್ಷಗಳು ಮೈತ್ರಿಕೂಟ ರಚನೆ ಮಾಡಿಕೊಳ್ತಿದ್ದಾರೆ. ಇದರಿಂದ ಕೆರಳಿರುವ ಬಿಜೆಪಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ಗೆ ಸಣ್ಣದೊಂದು ಶಾಕ್ ಕೊಟ್ಟಿದೆ. ಇದೀಗ 9 ಮಂದಿ ಶಾಸಕರ ಮೇಲೆ ಅನರ್ಹತೆ ಭೀತಿ ಎದುರಾಗಿದ್ದು, ಎನ್ಸಿಪಿ ವಿರುದ್ಧ ಬಂಡಾಯ ಸಾರಿರುವ ಎನ್ಸಿಪಿ ನಾಯಕ ಅಜಿತ್ ಪವಾರ್ ಸೇರಿ 9 ಮಂದಿ ಶಾಸಕರನ್ನು ಅನರ್ಹ ಮಾಡಬೇಕು ಎಂದು ವಿಧಾನಸಭಾ ಅಧ್ಯಕ್ಷರಿಗೆ ಪವಾರ್ ಪತ್ರ ಬರೆದಿದ್ದಾರೆ. ಶಿವಸೇನೆ-ಬಿಜೆಪಿ ಮೈತ್ರಿಕೂಟ ಸರ್ಕಾರಕ್ಕೆ ಬೆಂಬಲ ನೀಡಿ ಡಿಸಿಎಂ ಪಟ್ಟ ಪಡೆದುಕೊಂಡಿರುವ ಅಜಿತ್ ಪವಾರ್, ನಮ್ಮ ಬಳಿ ಹೆಚ್ಚಿನ ಶಾಸಕರ ಬಲ ಇದೆ. ನಮ್ಮನ್ನು ಅನರ್ಹ ಮಾಡಲು ಆಗಲ್ಲ ಎಂದಿದ್ದಾರೆ. ಸುನಿಲ್ ತತ್ಕಾರೆಯನ್ನ ನೂತನ ರಾಜ್ಯಾಧ್ಯಕ್ಷ ಎಂದು ಘೋಷಿಸಿಕೊಂಡಿದೆ.
ಮಹಾರಾಷ್ಟ್ರದಲ್ಲೂ ಮುಂದಿನ ವರ್ಷ ಚುನಾವಣೆ ಫಿಕ್ಸ್..!
ದೇಶದಲ್ಲಿ ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದ್ದು, ಆ ಬಳಿಕ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ತೆಗೆದುಕೊಂಡ ನಿಲುವುಗಳಿಂದ ಜನರು ರೋಸಿ ಹೋಗಿ, ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲೂ ಜನರು ಬಿಜೆಪಿ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗು ಬಿಜೆಪಿ ಸರ್ಕಾರಕ್ಕೆ ಯಾವುದೇ ಅವಶ್ಯತೆ ಇಲ್ಲದೆ ಇದ್ದಾಗಲೂ ಎನ್ಸಿಪಿಯನ್ನು ಇಬ್ಭಾಗ ಮಾಡಿದ್ದು, ಸಹಜವಾಗಿಯೇ ಜನಸಾಮಾನ್ಯರ ಕೆಂಗಣ್ಣಿಗೂ ಗುರಿಯಾಗುವ ಭೀತಿ ಹೆಚ್ಚಾಗಿದೆ. ಒಂದು ವೇಳೆ ಮರಾಠಿ ಸಮುದಾಯ ಭಾರತೀಯ ಜನತಾ ಪಾರ್ಟಿ ವಿರುದ್ಧ ತಿರುಗಿ ಬಿದ್ದರೆ ಲೋಕಸಭಾ ಚುನಾವಣೆ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೆಟ್ಟು ಬೀಳುವ ಸಂಭವ ದಟ್ಟವಾಗಿದೆ ಎನ್ನಬಹುದು.
ಸಂ-
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0