ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಅನ್ನೋ ಕಾರಣಕ್ಕೆ ಗುತ್ತಿಗೆದಾರರಿಗೆ ಬಿಲ್​ ಬಿಡುಗಡೆ ಮಾಡದೆ ಸರ್ಕಾರ ತನಿಖೆಗೆ ಆದೇಶ ಮಾಡಿದೆ. ಈ ನಡುವೆ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರು ಬಿಲ್​ ಬಿಡುಗಡೆಗೆ ಆಗ್ರಹ ಮಾಡುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಪ್ರಯೋಗಾಲಯ ಹಾಗು ದಾಖಲೆಗಳು ಇರುವ ಕೊಠಡಿಗೆ ಬೆಂಕಿ ಬಿದ್ದಿದೆ. ಗುಣ ನಿಯಂತ್ರಣ ಕೊಠಡಿಗೆ ಬೆಂಕಿ ಬಿದ್ದಿದ್ದು, ಪ್ರಯೋಗಾಲಯದಲ್ಲಿ ತನಿಖೆ ಮಾಡುವಾಗ ಕೆಮಿಕಲ್​ ರಿಯಾಕ್ಷನ್​​ನಿಂದ ಅಗ್ನಿ ಅವಘಡ ಸಂಭವಿಸಿದೆ ಅನ್ನೋ ಮಾತುಗಳು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಈ ಬೆಂಕಿ ಘಟನೆ ಬಗ್ಗೆ ಆಕಸ್ಮಿಕ ಅಲ್ಲ, ಉದ್ದೇಶ ಪೂರ್ವಕ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.