ಭೂಲೋಕದ ಜೀವಿಗಳಲ್ಲಿ ಬುದ್ಧಿಶಕ್ತಿ ಇರುವ ಏಕೈಕ ಜೀವಿ ಮನುಷ್ಯನಾಗಿದ್ದು ಪ್ರತಿಯೊಬ್ಬರು ಮಾನವೀಯತೆಯಿಂದ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡಬೇಕು ಸಮಾಜ ಸೇವೆಯಿಂದ ಮನಶಾಂತಿ ದೊರೆಯುತ್ತದೆ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರಕಾಶ್ ಬಾಗಲಿ ತಿಳಿಸಿದರು.
ಭೂಲೋಕದ ಜೀವಿಗಳಲ್ಲಿ ಬುದ್ಧಿಶಕ್ತಿ ಇರುವ ಏಕೈಕ ಜೀವಿ ಮನುಷ್ಯನಾಗಿದ್ದು ಪ್ರತಿಯೊಬ್ಬರು ಮಾನವೀಯತೆಯಿಂದ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡಬೇಕು ಸಮಾಜ ಸೇವೆಯಿಂದ ಮನಶಾಂತಿ ದೊರೆಯುತ್ತದೆ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರಕಾಶ್ ಬಾಗಲಿ ತಿಳಿಸಿದರು.
ಕುಕನೂರು :
ಭೂಲೋಕದ ಜೀವಿಗಳಲ್ಲಿ ಬುದ್ಧಿಶಕ್ತಿ ಇರುವ ಏಕೈಕ ಜೀವಿ ಮನುಷ್ಯನಾಗಿದ್ದು ಪ್ರತಿಯೊಬ್ಬರು ಮಾನವೀಯತೆಯಿಂದ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡಬೇಕು ಸಮಾಜ ಸೇವೆಯಿಂದ ಮನಶಾಂತಿ ದೊರೆಯುತ್ತದೆ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರಕಾಶ್ ಬಾಗಲಿ ತಿಳಿಸಿದರು.
ಪಟ್ಟಣದ ಎಂಟನೇ ವಾರ್ಡಿನಲ್ಲಿರುವ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದನ್ವಯ 15 ದಿನಗಳ ಕಾಲ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ "ನನ್ನ ಜೀವನ ನನ್ನ ಸ್ವಚ್ಛ ನಗರ" ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪ್ರಕಾಶ್ ಬಾಗಲಿ ಮಾತನಾಡುತ್ತಾ ಈ ಕಾರ್ಯಕ್ರಮದಲ್ಲಿ ನಿಮ್ಮ ಬಳಿ ನಿಮಗೆ ಅವಶ್ಯಕತೆ ಇಲ್ಲದೆ ಇರುವ ವಸ್ತುಗಳನ್ನು ತಂದು ಈ ಒಂದು ಕಾರ್ಯಕ್ರಮದಲ್ಲಿ ನೀಡಿದರೆ ಅವುಗಳ ಅವಶ್ಯಕತೆ ಇರುವ ವ್ಯಕ್ತಿಗಳು ಯಾವುದೇ ನಿಬಂಧನೆಗಳಿಲ್ಲದೆ ತೆಗೆದುಕೊಂಡ ಹೋಗಲು ಸ್ವತಂತ್ರರಾಗಿದ್ದು ಅವುಗಳ ಬಳಕೆಗೆ ದಾರಿ ಮಾಡಿ ಕೊಡುವಂತಾಗಿದೆ. ಇಲ್ಲಿ ವಸ್ತುಗಳನ್ನು ತಂದು ಕೊಡುವವರು ಹಾಗೂ ತೆಗೆದುಕೊಂಡು ಹೋಗುವರು ಸಂಪೂರ್ಣ ಸ್ವಾತಂತ್ರವನ್ನು ಹೊಂದಿದ್ದು ಯಾವುದೇ ನಿಬಂಧನೆಗಳು ಇರುವುದಿಲ್ಲ ಆದ್ದರಿಂದ ನಿಮಗೆ ಅವಶ್ಯಕತೆ ಇಲ್ಲದ ನಿರೂಪಯುಕ್ತ ವಸ್ತುಗಳನ್ನು ಈ ಕಾರ್ಯಕ್ರಮದಲ್ಲಿ ತಂದು ನೀಡಿದರೆ ಆ ವಸ್ತುಗಳ ಅವಶ್ಯಕತೆ ಇರುವವರಿಗೆ ಅನುಕೂಲ ಮಾಡಿಕೊಟ್ಟ ಆತ್ಮ ತೃಪ್ತಿ ಹೊಂದಬಹುದಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ರಾಜೇಶ್ವರಿ ಮಾತನಾಡುತ್ತಾ ನಿಮ್ಮ ಮನೆ ಮತ್ತು ಅಂಗಡಿಗಳಲ್ಲಿ ಮರುಬಳಕೆಯಾಗುವ ಉಪಯೋಗಿಸದೆ ಇರುವ ಹಳೆಯ ವಸ್ತುಗಳ, ಬಟ್ಟೆಗಳು, ಆಟಿಕೆ ಸಾಮಾನುಗಳು, ಖಾಲಿ ಚೀಲಗಳು, ಎಲೆಕ್ಟ್ರಾನಿಕ್ ಸಾಮಾನುಗಳು ಸೇರಿದಂತೆ ನಿನ್ನತರ ವಸ್ತುಗಳ ಸಂಗ್ರಹಿಸುವ ಕಾರ್ಯಕ್ರಮ ಇದಾಗಿದ್ದು ಈ ಕೇಂದ್ರದಲ್ಲಿ ತಮ್ಮಲ್ಲಿರುವ, ತಮಗೆ ಅನಾವಶ್ಯಕ ಎಂದೆನಿಸುವ ವಸ್ತುಗಳನ್ನು ತಂದು ನೀಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಪಟ್ಟಣದ ನಾಗರಿಕರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0