ಪವರ್ ಹೌಸ್ನಲ್ಲಿ ತಾವೊಬ್ಬರೇ ಇರಬೇಕೆಂಬುದು ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಆಗಿದ್ದು, ಹೀಗಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಮಟ್ಟಹಾಕಲು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಪವರ್ ಹೌಸ್ನಲ್ಲಿ ತಾವೊಬ್ಬರೇ ಇರಬೇಕೆಂಬುದು ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಆಗಿದ್ದು, ಹೀಗಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಮಟ್ಟಹಾಕಲು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿ :
ಪವರ್ ಹೌಸ್ನಲ್ಲಿ ತಾವೊಬ್ಬರೇ ಇರಬೇಕೆಂಬುದು ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಆಗಿದ್ದು, ಹೀಗಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಮಟ್ಟಹಾಕಲು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರೇ ಡಿಸಿಎಂ ಆದರೆ ಸಿದ್ದರಾಮಯ್ಯ ಅವರ ನಂತರ ಪವರ್ ಸೆಂಟರ್ನಲ್ಲಿ ಡಿ.ಕೆ.ಶಿವಕುಮಾರ್ ಇರುತ್ತಾರೆ. ಹೀಗಾಗಿ ಮೂವರನ್ನು ಡಿಸಿಎಂ ಮಾಡಿದರೆ ಪವರ್ ಸೆಂಟರ್ನಲ್ಲಿ ತಾವೊಬ್ಬರೇ ಇರಬಹುದು ಎಂಬುದು ಸಿದ್ದರಾಮಯ್ಯ ಅವರ ಗೇಮ್ ಪ್ಯ್ಲಾನ್ ಆಗಿದೆ. ಇದೇ ಕಾರಣದಿಂದಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧವಾಗಿ ಅವರ ಪಕ್ಷದವರೇ ಬೇರೆ ಬೇರೆ ಆರೋಪಗಳನ್ನು ಮಾಡಿಸುತ್ತಿದ್ದಾರೆ. ಕಾನೂನು ಪ್ರಕಾರ ಏನಿದೆ.
ಅದರ ಬಗ್ಗೆ ಒಂದೆಡೆ ತನಿಖೆ ನಡೆಯುತ್ತಿದ್ದರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ವ್ಯವಸ್ಥಿತವಾಗಿ ಬಲೆ ಹೆಣೆದು ಡಿ.ಕೆ.ಶಿವಕುಮಾರ್ ಅವರನ್ನು ಮಟ್ಟಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ. ಅದರ ಸಂಬಂಧವಾಗಿಯೇ ಈ ಎಲ್ಲಾ ಗುದ್ದಾಟಗಳು ನಡೆಯುತ್ತಿದೆ ಎಂದ ಅವರು, ಎರಡೂವರೆ ವರ್ಷದ ಬಳಿಕ ಪವರ್ ಹೌಸ್(ಅಧಿಕಾರ) ಹಂಚಿಕೆ ಆಗಬೇಕೆಂಬುದು ಮಾಧ್ಯಮಗಳು ಹಾಗೂ ಕಾಂಗ್ರೆಸ್ನ ಒಳಗಿನಿಂದ ಬಂದಿರುವ ಮಾಹಿತಿಯಾಗಿದೆ. ಈ ಕಾರಣದಿಂದಲೇ ಪವರ್ ಶೇರಿಂಗ್ ಅನ್ನು ಈಗಲೇ ಕತ್ತರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ವರದಿ : ನಿಖಿಲ್ ಚೌದರಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0