ಜಿಲ್ಲೆಯ ಕುಕನೂರು -ಯಲಬುರ್ಗಾ ಅವಳಿ ತಾಲೂಕುಗಳ ಭಾಗದ ರೈತರಿಗೆ ಸರ್ಕಾರ ರಿಯಾಯ್ತಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ರೈತರಿಗೆ ಕೊಡಬೇಕು.
ಜಿಲ್ಲೆಯ ಕುಕನೂರು -ಯಲಬುರ್ಗಾ ಅವಳಿ ತಾಲೂಕುಗಳ ಭಾಗದ ರೈತರಿಗೆ ಸರ್ಕಾರ ರಿಯಾಯ್ತಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ರೈತರಿಗೆ ಕೊಡಬೇಕು.
ಕೊಪ್ಪಳ :
ಜಿಲ್ಲೆಯ ಕುಕನೂರು -ಯಲಬುರ್ಗಾ ಅವಳಿ ತಾಲೂಕುಗಳ ಭಾಗದ ರೈತರಿಗೆ ಸರ್ಕಾರ ರಿಯಾಯ್ತಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ರೈತರಿಗೆ ಕೊಡಬೇಕು. ಒಂದುವೇಳೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಕಳಪೆ ಬೀಜಗಳನ್ನು ಕೊಟ್ಟು ರೈತರನ್ನು ಸಂಕಷ್ಟಕ್ಕೆ ಇಡಾಗುವಂತೆ ಮಾಡಿದರೆ ಇದಕ್ಕೆ ಅಧಿಕಾರಿಗಳೆ ಹೊಣೆ ನಂತರ ಕೆಲಒಂದು ತಾಲೂಕಿನಲ್ಲಿ ನಕಲಿ ಬೀಜ ಬಂದಿದೇ ನಮ್ಮ ತಾಲೂಕಿನಲ್ಲಿ ಒಂದು ವೇಳೆ ನಕಲಿ ಬೀಜ ಕಂಡು ಬಂದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಆಗ್ರಹಿಸಿದರು.
ಕುಕನೂರು -ಯಲಬುರ್ಗಾ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿ ಒಂದು ವಾರ ಕಳೆದರೂ ತಾಲ್ಲೂಕಿನ ಕೆಲವುಕಡೆ ಸಮರ್ಪಕವಾಗಿ ಮಳೆ ಆಗದೆ ಇರುವದರಿಂದ ರೈತರು ಬಿತ್ತನೆ ಮಾಡದೆ ಜಮೀನು ಹದಗೊಳಿಸಿ ಹಾಗೆ ಬಿಟ್ಟಿದ್ದಾರೆ ಇನ್ನು ಕೆಲವು ರೈತರು ತಮ್ಮ ಜಮೀನಿನಲ್ಲಿ ತೇವಾಂಶ ಕಡಿಮೆ ಇದ್ದರೂ ಸಹ ಕೆಲವು ರೈತರು ಸಾಲ ಸೂಲ ಮಾಡಿ ಬಿತ್ತನೆ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ ಇನ್ನೂ ಕೆಲವು ರೈತರು ಬಿತ್ತನೆ ಬೀಜ ಖರೀದಿಸಿ ಮಳೆಗಾಗಿ ಆಕಾಶ ನೋಡುತ್ತಾ ಮಳೆರಾಯನನ್ನು ನಂಬಿ ಬಿತ್ತನೆ ಬೀಜವನ್ನು ಮನೆಯಲ್ಲಿ ಇಟ್ಟುಕೊಂಡು ಮಳೆರಾಯನನ್ನು ಕಾದುಕುಳಿತ್ತಿದ್ದಾರೆ
ದಿಡೀರನೆ ಮಳೆ ಆದರೆ ರೈತರಿಗೆ ಅಗತ್ಯ ಇರುವಷ್ಟು ಒಳ್ಳೆ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಇನ್ನೂಮುಂದೆ ಬೀಜದ ಕೊರತೆ ಆಗುವರಿತಿಯಲ್ಲಿ ಕಂಡು ಬಂದರೆ ಹೆಚ್ಚಿನ ಪ್ರಮಾಣದಲ್ಲಿ ಬೀಜ ಸಂಗ್ರಹಣೆ ಮಾಡಿಕೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಆಗ್ರಹಿಸಿದರು
ಈ ವೇಳೆಯಲ್ಲಿ ತಾಲೂಕಿನಲ್ಲಿ ಕೆಲವು ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಮಳೆ ಆಗಿದ್ದು ತೇವಾಂಶ ಕಡಿಮೆ ಇದ್ದರೂ ಸಹ ರೈತರಿಗೆ ಬಿತ್ತನೆ ಬೀಜ ಕೊಡುವುದರಲ್ಲಿ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಯಾವುದೇ ದುರ್ಬಳಕೆ, ತಾರತಮ್ಯ ಆಗದಂತೆ ಈ ವ್ಯವಸ್ಥೆ ಮಾಡಬೇಕು ಎಂದರಲ್ಲದೇ ರೈತ ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರೈತ ಸಂಘದ ರಾಜ್ಯ ಸಂಚಾಲಕರಾದ ಮಯಶಪ್ಪ ಹಡಪಾದ ಇವರು ಆಗ್ರಹಿಸಿದರು.
ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆಗಾಲ ಇದರಲ್ಲಿಯೇ ರೈತರಿಗೆ ಅನುಕೂಲವಾಗು ವಂತಹ ಸಲಹೆಗಳನ್ನು ರೈತರಿಗೆ ತಿಳಿಸಬೇಕು ಹಾಗೂ ಅಧಿಕಾರಿಗಳು ರೈತ ಮುಖಂಡರ ಗಮನಕ್ಕೆ ತರಬೇಕು. ಈ ಭಾಗದ ರೈತರು ಮುಗ್ಧರಾಗಿರುತ್ತಾರೆ ರೈತ ಬೆನ್ನೆಲು ಬಾಗಿರುವ ರೈತ ಕುಲಕ್ಕೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರದ ಅಧಿಕಾರಿಗಳು ಬದ್ಧವಾಗಿ. ತಾಲೂಕಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿ ಸಬೇಕು ಎಂದು. ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಹೂಗಾರ ಇವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ. ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ ಕಮತರ, ಪ್ರಧಾನ ಕಾರ್ಯದರ್ಶಿ ರಾಜಣ್ಣ ಮಡಿವಾಳರ, ರವಿ.ಕಮತರ, ರವಿ ತಳವಾರ, ಬಸಪ್ಪ.ಅಸೂಟಿ, ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಎಚ್ ಬಾಬರಿ, ಶಂಕ್ರಪ್ಪ ಹೊಕ್ಕಳದ, ಮಹಾದೇವಪ್ಪ ಕುರಿ, ಪತ್ರೆಪ್ಪ ವೀರಾಪುರ ಸೇರಿದಂತೆ ರೈತ ಮುಖಂಡರು ಆಗ್ರಹಿಸಿದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0