ತಾಲೂಕಿನ ಗಿಣಿಗೇರಾ ಗ್ರಾಮದಿಂದ ಪ್ರತಿನಿತ್ಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು ಗ್ರಾಮದಲ್ಲಿ ಬಸ್ ಗಳು ನೀಲ್ಗಡೆ ಮಾಡದೇ ಇರುವುದು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.
ತಾಲೂಕಿನ ಗಿಣಿಗೇರಾ ಗ್ರಾಮದಿಂದ ಪ್ರತಿನಿತ್ಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು ಗ್ರಾಮದಲ್ಲಿ ಬಸ್ ಗಳು ನೀಲ್ಗಡೆ ಮಾಡದೇ ಇರುವುದು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.
ಕೊಪ್ಪಳ :
ತಾಲೂಕಿನ ಗಿಣಿಗೇರಾ ಗ್ರಾಮದಿಂದ ಪ್ರತಿನಿತ್ಯ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು ಗ್ರಾಮದಲ್ಲಿ ಬಸ್ ಗಳು ನೀಲ್ಗಡೆ ಮಾಡದೇ ಇರುವುದು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.
ವಿದ್ಯಾರ್ಥಿಗಳ ಪರದಾಟ ಕಂಡ ಗಿಣಗೇರ ನಾಗರಿಕ ಹೋರಾಟ ಸಮಿತಿಯು ಉಚಿತ ಪ್ರಯಾಣ ಪ್ರಾರಂಭಿಸಿದ್ದಾಗಿನಿಂದ ಪ್ರತಿದಿನ ಶಾಲಾ ಕಾಲೇಜುಗಳಿಗೆ ಕೊಪ್ಪಳ ನಗರಕ್ಕೆ ಹೋಗಲು ವಾಹನದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಗಿಣಿಗೇರಿ ಗ್ರಾಮಕ್ಕೆ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಂದ ಬರುವ ಅಪಾರ ವಿದ್ಯಾರ್ಥಿಗಳಿಗೆ ಗಿಣಿಗೇರಿ ಗ್ರಾಮವೂ ಕೇಂದ್ರ ಹಳ್ಳಿಗಳಿಂದ ಬರುವ ಜನರು ಬಸ್ಸಿನಲ್ಲಿ ತುಂಬಿಕೊಂಡು ಬರುವುದರಿಂದ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಹತ್ತಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ ಗಿಣಗೇರ ಬಸ್ ನಿಲ್ದಾಣದಲ್ಲಿ ಕಾಣಸಿಗುವ ದೃಶ್ಯವಾಗಿದ್ದು ಇದರಿಂದ ಬೇಸತ್ತ ಗಿಣಿಗೇರ ನಾಗರಿಕ ಹೋರಾಟ ಸಮಿತಿಯು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಶೀಘ್ರದಲ್ಲಿಯೇ ಗಿಣಿಗೇರಿ ಗ್ರಾಮದ ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೊಳ್ಳದಿದ್ದಲ್ಲಿ ರಸ್ತೆ ಬಂದ್ ಮಾಡಿ ರಸ್ತಾರೋಕ ಚಳುವಳಿ ಮಾಡಲಾಗುವುದು ಎಂದು ಗಿಣಿಗೇರ ನಾಗರಿಕ ಸಮಿತಿಯ ಸದಸ್ಯರು ಎಚ್ಚರಿಕೆ ನೀಡಿರುತ್ತಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡು ಗಿಣಿಗೇರ ಗ್ರಾಮದಿಂದ ಕೊಪ್ಪಳಕ್ಕೆ ಕನಿಷ್ಠ ಮೂರು ಬಸ್ಸುಗಳನ್ನಾದರೂ ಕಲ್ಪಿಸಿ ಕೊಡಬೇಕೆಂದು ಹಾಗೂ ವಾರದ ಒಳಗಡೆ ಬಸ್ಸುಗಳ ವ್ಯವಸ್ಥೆ ಕಲ್ಪಿಸದೆ ಇದ್ದ ಪಕ್ಷದಲ್ಲಿ ನಮ್ಮ ಸಮಿತಿಯಿಂದ ಉಗ್ರ ಹೋರಾಟ ಅನಿವಾರ್ಯ ಎಂದು ಗಿಣಿಗೇರಾ ನಾಗರಿಕ ಹೋರಾಟ ಸಮಿತಿಯ ಶರಣು ಗಡ್ಡಿ, ಮಂಗಳೇಶ ರಾಥೋಡ, ಆನಂದ ಮೂರುಮನಿ, ಸುರೇಶ್ ಕಲಾಲ, ಮೌನೇಶ್ ಹಲಗೇರಿ, ಬಾಬು ಗೋಡೆಕರ, ಮಂಜುನಾಥ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0