ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ನರಸಿಂಹರಾಜ ಪೊಲೀಸರು, ಆರೋಪಿಗಳಿಂದ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ನರಸಿಂಹರಾಜ ಪೊಲೀಸರು, ಆರೋಪಿಗಳಿಂದ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು :
ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ನರಸಿಂಹರಾಜ ಪೊಲೀಸರು, ಆರೋಪಿಗಳಿಂದ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸೈಯದ್ ಅಯೂಬ್, ಮಹಮದ್ ಮುನ್ನಾ ಹಾಗೂ ಪ್ರಸಾದ್ ಆಸಿಫ್ ಬಂಧಿತರಾಗಿದ್ದು, ಮತ್ತೋರ್ವ ಆರೋಪಿ ಫಯಾಜ್ ತಲೆ ಮರೆಸಿಕೊಂಡಿದ್ದಾನೆ. ಮೈಸೂರಿನ ಉನ್ನತಿನಗರ ಬಡಾವಣೆಯಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 832 ಗ್ರಾಂ ಚಿನ್ನದ ಒಡವೆ, 37 ಗ್ರಾಂ ಬೆಳ್ಳಿ ಕಾಯಿನ್ ಹಾಗೂ 1,70,000 ರೂ.ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದಾಗಿ ಮದ್ದೂರು, ಶ್ರೀರಂಗಪಟ್ಟಣ, ಕೆ.ಆರ್.ನಗರ ಹಾಗೂ ಮೈಸೂರು ಗ್ರಾಮಾಂತರ ಠಾಣೆಯ ತಲಾ ಒಂದು ಕಳುವು ಪ್ರಕರಣಗಳು ಪತ್ತೆಯಾದಂತಾಗಿದೆ.
ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ವಿರುದ್ದ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳಿವೆ. ಅಲ್ಲದೆ, ಮೈಸೂರಿನ ಪ್ರಸಾದ್ ಅಲಿಯಾಸ್ ಆಸಿಫ್ ಮತ್ತು ಫಯಾಜ್ ವಿರುದ್ದ ಮೈಸೂರಿನಲ್ಲಿ ಸಾಕಷ್ಟು ಕಳುವು ಪ್ರಕರಣಗಳಿವೆ. ನಾಲ್ವರು ಆರೋಪಿಗಳು ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸೈಯದ್ ಅಯೂಬ್ ಡಿ.27 ರಂದು, ಮಹಮದ್ ಮುನ್ನ ನ.29 ರಂದು, ಆಸಿಫ್ ಮತ್ತು ಫಯಾಜ್ ಜ.7ರಂದು ಬಿಡುಗಡೆ ಆಗಿದ್ದಾರೆ.
ಕಳವು ಪ್ರಕರಣಗಳಲ್ಲಿ ಭಾಗಿ ಆಗಿ ಜೈಲು ವಾಸ ಅನುಭವಿಸಿದ್ದರೂ ಆರೋಪಿಗಳು ತಮ್ಮ ಚಾಳಿ ಮುಂದುವರೆಸಿದ್ದಾರೆ. ಸೈಯದ್ ಅಯೂಬ್ ಹಾಗೂ ಮಹಮದ್ ಮುನ್ನಾ ಒಂದು ತಂಡವಾದರೆ, ಪ್ರಸಾದ್ ಮತ್ತು ಫಯಾಜ್ ಮತ್ತೊಂದು ಗ್ಯಾಂಗ್ ಆಗಿದೆ. ಎರಡೂ ಗ್ಯಾಂಗ್ ಗಳು ಜೈಲಿನಲ್ಲಿ ಒಂದಾಗಿ ಕಳ್ಳತನದ ಸ್ಕೆಚ್ ಹಾಕಿ ಯಾಸಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಚಾಲಾಕಿಗಳು ಕೆ.ಆರ್.ನಗರದಲ್ಲಿ ಕಾರನ್ನ ಕಳುವು ಮಾಡಿ ನಂಬರ್ ಪ್ಲೇಟ್ ಬದಲಿಸಿ ನಂತರ ಬಣ್ಣದ ಸ್ಟಿಕ್ಕರ್ ಅಂಟಿಸಿ ಕೃತ್ಯವೆಸಗಿ ನಂತರ ಕಳುವು ಮಾಡಿದ ಕಾರನ್ನು ಅದೇ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ. ಮಂಡ್ಯದಲ್ಲಿ ವೈದ್ಯರ ಮನೆಯಲ್ಲಿ ಕೃತ್ಯವೆಸಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ವೈದ್ಯರು ವಾಸ ಇರುವ ಮನೆಯ ಕೆಳಭಾಗದಲ್ಲಿ ನ್ಯಾಯಾಧೀಶರೊಬ್ಬರು ವಾಸವಿದ್ದರೂ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0