ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದ
ರೋಣ ವಿಧಾನಸಭಾ ಮತಕ್ಷೇತ್ರದ ಸಾರ್ವಜನಿಕ ಪ್ರಚಾರದ ಅಂತಿಮ ದಿನದ ಸಾರ್ವಜನಿಕ ರ್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೆಚ್ ಎಸ್ ಸೋಂಪುರ ಜೆಡಿಎಸ್ ಅಭ್ಯರ್ಥಿ ಮುಕ್ತುಮಸಾಬ್ ಮುಧೋಳರವರಿಗೆ ಈ ಬಾರಿ " ನೀನು ಅಲ್ಪಸಂಖ್ಯಾತರ ಮತ ಪಡಿಯದೆ ಠೇವಣಿ ಕಳೆದುಕೊಳ್ಳುವೆ " ಎಂದು ಬಹಿರಂಗ ಹೇಳಿಕೆಯನ್ನು ಕೊಡುತ್ತಿರುವಾಗಲೇ ಇಂತಹ ಅವಹೇಳನಕಾರಿ ಮಾತುಗಳನ್ನ ಆಡಬಾರದೆಂದು ಹತ್ತಿರವಿದ್ದ ಕಾಂಗ್ರೇಸ್ ಮುಖಂಡರು ಎಸ್ ಎಸ್ ಸೋಂಪುರ ಕೈಯಲ್ಲಿದ್ದ ಧ್ವನಿವರ್ಧಕವನ್ನು ಕಸಿದುಕೊಂಡಾಗಲೇ ಮನವರಿಕೆಯಾಗಬೇಕಿತ್ತು ಆದರೆ ಈ ಕರಿತು ಕ್ಷೇಮೆಯ ಚಕಾರೆತ್ತದೆ ಇದ್ದದ್ದು ನಾಲಿಗೆ ನಾಗರಿಕತೆಯ ಪ್ರಜ್ಞೆ ತೋರಿಸುತ್ತದೆ. ಇಂತಹ ಕಾರ್ಯಕರ್ತರ ಪಕ್ಷ ಮತದಾರರನ್ನು ಹೇಗೆ ಸೇಳದಿತು?
ರೋಣ ಮತಕ್ಷೇತ್ರಕ್ಕೆ ತನ್ನದೇಯಾದ ಐತಿಹಾಸಿಕ ಪರಂಪರೆ ಇದೇ. ಈ ಹಿಂದೆ ಬಿಜೆಪಿಯನ್ನ ಆಯ್ಕೆ ಮಾಡಿದ ಈ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿ ಪರ್ಸಂಟೆಜ್ ಸರ್ಕಾರ ಎಂಬ ಕಾರಣಕ್ಕೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಎಸ್ ಪಾಟೀಲ್ ಗೆ ಬಹುಮತದ ಜನಾದೇಶ ನೀಡಿದ್ದು ಈ ಕ್ಷೇತ್ರದ ಪರಂಪರೆಯಂದೆ ಹೇಳಬೇಕಾಗುತ್ತದೆ.
ರೋಣ ಮತಕ್ಷೇತ್ರದಿಂದ ಬಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸಾವಿರ ಕರೆಗಳ ಸರದಾರ, ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಕ್ಯಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಒತ್ತಾಹಿಸಿದ್ದಾರೆ.
Your experience on this site will be improved by allowing cookies.