ಎಲ್ಲಾ ಸಮುದಾಯದ ಪ್ರೀತಿ ಪಾತ್ರರಾದ ಹಾಗೂ ಎಲ್ಲರನ್ನೂ ಅಣ್ಣ ತಮ್ಮರಂತೆ ತಬ್ಬಿಕೊಂಡು ಹೋಗುವ ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಹಿರಿಯ ಮುಖಂಡರಾದ ಸನ್ಮಾನ್ಯಶ್ರೀ ಜಿ. ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಬೇಕು ಎಂದು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಮೈಲಾರಪ್ಪ ವೀ. ಚಳ್ಳಮರದ ಅವರ ಆಗ್ರಹವಾಗಿದೆ.
ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕರ್ನಾಟಕ ರಾಜಕೀಯ ಇದೀಗ ದೆಹಲಿ ಅಂಗಳದಲ್ಲಿದ್ದು ಯಾವುದೇ ಬಂಡಾಯ ಏರ್ಪಡದಂತೆ ಸಿಎಂ ಆಯ್ಕೆ ಮಾಡೋದು ಕಾಂಗ್ರೆಸ್ ಹೈಕಮಾಂಡ್ ಬೆಣ್ಣೆಯಲ್ಲಿ ಸಿಲುಕಿದ ಕೂದಲನ್ನು ತೆಗೆಯುವಂತೆ ಆಗಿದೆ.
ನಿನ್ನೆ ಹೊಟ್ಟೆನೋವೆಂದು ದೆಹಲಿ ಪ್ರಯಾಣ ರದ್ದುಗೊಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಆಗಿ, ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಆಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೀಗಾಗಲೇ ಘೋಷಣೆ ಮಾಡಲಾಗಿದೆ.
Your experience on this site will be improved by allowing cookies.