ಇಂದಿನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ರಂಗಭೂಮಿ ಕಲೆ ಕ್ಷೀಣಿಸಿತ್ತಿರುವುದು ವಿಷಾದದ ಸಂಗತಿಯಾಗಿದೆ. ರಂಗಭೂಮಿಯೇ ಜೀವಾಳವೆಂದೆನಿಸಿದ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ರಂಗಭೂಮಿ ಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ ಆದ್ದರಿಂದ ಮನೋರಂಜನೆಯ ಮೂಲವಾದ ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಜರುಗಬೇಕಾಗಿದೆ ಎಂದು ಸಾಹಿತಿ ಮತ್ತು ಹಿರಿಯ ಕಲಾವಿದ ಬಸವರಾಜ ಬಿನ್ನಾಳ ತಿಳಿಸಿದರು.
ರಂಗಭೂಮಿ ಶಿಸ್ತು ಮತ್ತು ಸೌಹಾರ್ದತೆಯ ಸಂಕೇತವಾಗಿದೆ,ಈ ರಂಗದಲ್ಲಿ ಪಳಗಿದ ವ್ಯಕ್ತಿ ಯಾವುದೇ ರಂಗದಲ್ಲಿಯಾದರು ಉನ್ನತಿಯಾಗಬಲ್ಲ ಎಂದು ಹಿರಿಯ ಪತ್ರಕರ್ತ ಮಲ್ಲು ಮಾಟರಂಗಿ ಹೇಳಿದರು.
Your experience on this site will be improved by allowing cookies.