ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...
ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.
ರೋಣ ಕ್ಷೇತ್ರದ ಎಲ್ಲ ಸಮಾಜಗಳ ಜನರ ಗೌರವಾದರದ ಜತೆಗೆ ಪ್ರೀತಿಗೆ ಪಾತ್ರರಾದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲರಿಗೆ ಅಪಾರ ಜನರ ಬೆಂಬಲ, ಆಶೀರ್ವಾದಗಳ ಶ್ರೀರಕ್ಷೆ ಇದೆ ಎಂದು ಡಾ. ಪ್ರಶಾಂತ ಪಾಟೀಲ ಹೇಳಿದರು.
ಬಿಜೆಪಿ ಹಿರಿಯ ನಾಯಕ ಮಾಜಿ ಸ್ಥಾಯಿ ಸಮಿತಿ ಚೆರಮನ್ ಶರಣಪ್ಪ ರೇವಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ
ಅತ್ಯಂತ ಆಕರ್ಷಣಿಯ ಮತಕ್ಷೇತ್ರವಾದ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಎಸ್ ಪಾಟೀಲ ಗಜೇಂದ್ರಗಡದಲ್ಲಿ ಬೃಹತ್ ರೋಡ ಶೋ ಆರಂಭಿಸಿದರು.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಅವಕಾಶವಾಗದಂತೆ ಪಕ್ಷದ ಅಭ್ಯರ್ಥಿಗಳು ಬೆಂಗಳೂರಿಗೆ ಆಗಮಿಸಿ ನಿರ್ದಿಷ್ಟ ಸ್ಥಳದಲ್ಲಿ ಉಳಿಯುವಂತೆ ನಿರ್ದೇಶಿಸಿದೆ.
ಪ್ರಜಾಪ್ರಭುತ್ವವನ್ನು ಗೌರವಿಸುವ ವ್ಯಕ್ತಿಯಾಗಿ ಮತದಾರ ನೀಡಿದ ತೀರ್ಪಿಗೆ ತಲೆಬಾಗಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಆದರೆ ಅತಿ ಬೇಗನೆ ಬಿಜೆಪಿಗರು ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುತ್ತೇವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ರಾಜ್ಯದಲ್ಲಿ ಸದ್ಯ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂಗಾದಿಗಾಗಿ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ನ ಯಾವುದೇ ನಿಲುವಿಗೂ ಬಾಗದ ಇಬ್ಬರೂ ನಾಯಕರು ಮುಖ್ಯಮಂತ್ರಿ ಪಟ್ಟ ಬಿಟ್ಟು ಇನ್ಯಾವುದೇ ಆಫರ್ ನಮಗೆ ಬೇಡ ಅಂತಿದ್ದಾರೆ.
ರಾಜ್ಯ ವಿಧಾಸಭಾ ಚುನಾವಣೆ ಮುಗಿದಿದ್ದು, ಈ ಬಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು 63 ಜನ. ಅದರಲ್ಲಿ ಕಾಂಗ್ರೆಸ್ನಿಂದ 30 ಜನರು, ಬಿಜೆಪಿಯಿಂದ 22, ಜೆಡಿಎಸ್ನಿಂದ 8 ಹಾಗೂ ಪಕ್ಷೇತರರಾಗಿ ಇಬ್ಬರು, ಸರ್ವೋದಯ ಕರ್ನಾಟಕದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ಹೊಟ್ಟೆನೋವೆಂದು ದೆಹಲಿ ಪ್ರಯಾಣ ರದ್ದುಗೊಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.